ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ ಆಡಳಿತ ವೈದ್ಯಾಧಿಕಾರಿ ಆಶಾಜ್ಯೋತಿ, ದಂತ ತಜ್ಞರಾದ ಡಾ.ಜಯದೀಪ್, ಅರಿವಳಿಕೆ ತಜ್ಞರಾದ ಡಾ. ಜಯಕುಮಾರಿ, ಡಾ. ಶ್ವೇತಾ ಬೀಳ್ಕೋಡುಗೆ ಸಮಾರಂಭ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ವೈದ್ಯಾಧಿಕಾರಿ ಕಛೇರಿಯಲ್ಲಿ ನಡೆಯಿತು.
ರಕ್ಷಾ ಸಮಿತಿ ಸದಸ್ಯರಾದ ಆಸ್ಕರ್ ಆನಂದ್, ಸುದೇಶ್ ಶೆಟ್ಟಿ ಶಾಂತಿನಗರ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಮುಖೇಶ್ ಕೆಮ್ಮಿಂಜೆ ಶುಭಹಾರೈಸಿ ಮಾತನಾಡಿದರು. ಸದಸ್ಯರಾದ ವಿಕ್ಟರ್ ಪಾಯಿಸ್, ಆಸ್ಪತ್ರೆಯ ವೈದ್ಯರ ತಂಡ, ಸಿಬ್ಬಂದಿಗಳ ತಂಡದ ಸದಸ್ಯರು ಉಪಸ್ಥಿತರಿದ್ದರು.