ಖರ್ಗೆ ವಿರುದ್ಧದ ಅವಹೇಳನಕಾರಿ ಪದ ಬಳಕೆ : ಸುಪ್ರೀಂನಿಂದ ಸೂಲಿಬೆಲೆ ಕೇಸ್ ರದ್ದು
ಪುತ್ತೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಕಾರ್ಯಕ್ರಮವೊಂದರಲ್ಲಿ ಸೂಲಿಬೆಲೆ, ತಮ್ಮ ಮಾತುಗಳ ನಡುವೆ ಖರ್ಗೆಯವರನ್ನು ಅವಹೇಳನಕಾರಿಯಾಗಿ ಎಂದು ಸಂಬೋಧಿದ್ದರೆಂದು ಅವರ ವಿರುದ್ಧ ರಾಯಚೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವತಿಯಿಂದ ಜಾತಿನಿಂದನೆಯ ದೂರು ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ರಾಯಚೂರಿನ ಶಿರವಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಈ ಬಗ್ಗೆ ನ್ಯಾಯಮೂರ್ತಿಗಳಾದ ಸುಂದರೇಶ್ ಹಾಗೂ ಕೋಟಿಶ್ವರ ಸಿಂಗ್ ಅವರ ಪೀಠವು ಎಫ್ಐಆರ್ ರದ್ದುಗೊಳಿಸಿ ಆದೇಶ ನೀಡಿದ್ದು, ಸೂಲಿಬೆಲೆ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.