ತುಳುವೆರೆಗ್ ಬೊಕ್ಕ ರೈತೆರೆಗ್ ಅಮವಾಸ್ಯೆನೇ ರಜೆತ್ತ ದಿನೊ – ತಮ್ಮಣ್ಣ ಶೆಟ್ಟಿ
ಪುತ್ತೂರು: ತುಳುನಾಡ್ ದ ಜನೊಕುಲೆಗ್, ಅಂಚನೇ ರೈತೆರೆಗ್ ಈ ಅಮವಾಸ್ಯೆ ಪಂನ್ಪಿನವೇ ನಿಜವಾಯಿನ ರಜೆತ ದಿನ. ಅಮವಾಸ್ಯೆ ದಾನಿ ಪ್ರಕೃತಿದ ಮಿತ್ ಸುಮಾರು ಬದಲಾವಣೆ ಆಪುಂಡ್ , ಕಡಲು ಸಮೇತ ಆ ದಿನೊತಾನಿ ಪನಿ ಜೋರಾದೇ ಶಬ್ದ ಮಲ್ಪುಂಡ್ ಇಂಚಪುರಾ ಇಪ್ಪುನಗಾ ಅಮವಾಸ್ಯೆ ಲಾ ಒಂಜಿ ಎಡ್ಡೇ ದಿನನೇಂದ್ ತುಳುನಾಡ್ ದ ದೈವೊರಾಧನೆ ಬೊಕ್ಕ ಸಂಸ್ಕೃತಿ ವಿಮರ್ಶಕೆರಾಯಿನ ತಮ್ಮಣ್ಣ ಶೆಟ್ಟಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತರಾಷ್ಟ್ರೀಯ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುವ ಜೆಸಿಐ ಪುತ್ತೂರು ಘಟಕದ ಜುಲೈ ತಿಂಗಳ ಮಾಸಿಕ ಸಭೆಯಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮ ಇದರ ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಿ ಅಮವಾಸ್ಯೆ ದಿನ ನಾವು ಕುಡಿಯುವ ಹಾಲೆ ಮರದ ಕಷಾಯದ ಮಹತ್ವ, ಪ್ರತಿ ಮೂರು ತಿಂಗಳಿಗೊಮ್ಮೆ ತುಳುನಾಡಿನಲ್ಲಿ ಬದಾಗುವ ಆಹಾರ ಪದ್ಧತಿ ಬಗ್ಗೆ ವಿವರಣೆ ನೀಡಿದರು. ಬಳಿಕ ಮಾತನಾಡಿದ ಅವರು, ತುಳುನಾಡ್ ದ ಪ್ರತಿಯೊಂಜಿ ಇಲ್ ಲ ಒಂಜಿ ಯುನಿವರ್ಸಿಟಿ ದ ಲೆಕ್ಜೊನೆ. ಮುಲ್ಪದ ಪ್ರತಿಯೊರಿಲ ಒಂಜಿ ಲೈಬ್ರರಿ. ಹಿಂದಿನವರ ಆಹಾರ ಕ್ರಮ ಆರೋಗ್ಯ ರಕ್ಷಣೆಗಾಗಿದ್ದಾರೇ , ಯುವ ಪೀಳಿಗೆಯು ಬ್ರೆಡ್ -ಬನ್ ಕಡೆಗೆ ಮುಖ ಮಾಡಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮನೆ ಕಟ್ಟುವ ಸಂದರ್ಭದಲ್ಲಿ ಅಡುಗೆ ಕೋಣೆ ಎನ್ನುವಂತಹ ಕಲ್ಪನೆ ಬರಲಿಕ್ಕಿಲ್ಲ , ಯಾಕೆಂದರೆ ಎಲ್ಲರೂ ಝೋಮೆಟೋ ಗೆ ಜೋತು ಬೀಳುವವರಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿ , ಅದಷ್ಟೂ ಬೇಗನೆ ನಾವೆಲ್ಲರೂ , ನಮ್ಮ ಮಕ್ಕಳ ಸಹಿತ ಮೂಲ ಸಂಸ್ಕೃತಿಯಡೆಗೆ ಮುಖ ಮಾಡೋಣವೆಂದು ಹೇಳಿ , ಹಾರೈಸಿದರು.
ಆ ಬಳಿಕ ಜೆಸಿಐ ವತಿಯಿಂದ ತಮ್ಮಣ್ಣ ಶೆಟ್ಟಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಜೆಸಿಐ ಪುತ್ತೂರು ಘಟಕದಿಂದ ಮಡಂತ್ಯಾರ್ ನಲ್ಲಿ ನಡೆಯಲಿರುವ “ಜೆಸಿಐ ವ್ಯವಹಾರಿಕ ಸಮ್ಮೇಳನ – 2025” ರಲ್ಲಿ ಸಾಧನ ಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಜೆಸಿಐ ವಲಯ ಉಪಾಧ್ಯಕ್ಷರಾದ ಜೆಸಿ ಸುಹಾಸ್ ಮರಿಕೆರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ 50ಕ್ಕೂ ಮಿಕ್ಕಿದ ವಿವಿಧ ತುಳುನಾಡಿನ ಆಟಿಯ ವಿಶೇಷ ಖಾದ್ಯಗಳನ್ನು ಜೆಸಿಐ ಸದಸ್ಯರು ತಯಾರಿಸಿ ತಂದು ,ಬಳಿಕ ಸಹಭೋಜನ ಮಾಡಲಾಯಿತು. ಖಾದ್ಯ ತಯಾರಿಸಿ ತಂದ ಪ್ರತಿ ಸದಸ್ಯರಿಗೂ ಅಧ್ಯಕ್ಷರಾದ ಭಾಗ್ಯೇಶ್ ರೈ ಅವರು ವಿಶೇಷ ಉಡುಗೊರೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಮೋಹನ ಕೆ, ಕಾರ್ಯದರ್ಶಿ ಜೆಸಿ ಮನೋಹರ ಪಾಟಾಳಿ, ಮಹಿಳಾ ಘಟಕದ ಸಂಯೋಜಕರಾದ ಜೆಸಿ ಆಶಾ ಮೋಹನ್ ಮುತ್ಲಾಜೆ, ಜೂನಿಯರ್ ಜೆಸಿ ಸಂಯೋಜಕರಾದ ಜೆಜೆಸಿ ಕುಮಾರಿ ಸ್ವಸ್ತಿ ಶೆಟ್ಟಿ, ಕಾರ್ಯಕ್ರಮದ ಸಂಯೋಜಕರಾದ ಜೆಸಿ ಮಾಲಿನಿ ಕಶ್ಯಪ್ ಉಪಸ್ಥಿತರಿದ್ದರು. ಜೆಸಿ ರಮ್ಯಾ ಭಾಗ್ಯೇಶ್ ರೈ ಅವರು ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಜೆಸಿ ರಂಜಿನಿ ಶೆಟ್ಟಿ ಜೆಸಿ ವಾಣಿಯನ್ನು ವಾಚಿಸಿದರು. ಜೆಸಿಐ ಪೂರ್ವ ಅಧ್ಯಕ್ಷರಾದ ದಾಮೋದರ ಪಾಟಾಳಿ ಅವರು ತಮ್ಮಣ್ಣ ಶೆಟ್ಟಿಯವರನ್ನು ಸಭೆಗೆ ಪರಿಚಯಿಸಿದರು.
ಸಭಾ ಕಾರ್ಯಕ್ರಮದ ನಂತರ “ತೆಂಗಿನಕಾಯಿ ಕಟ್ಟುವ ಸ್ಪರ್ಧೆ” ನಡೆಯಿತು ಕಾರ್ಯಕ್ರಮದಲ್ಲಿ ಜೆಸಿ ಪುತ್ತೂರು ಘಟಕದ ಪೂರ್ವ ಅಧ್ಯಕ್ಷರು, ಘಟಕ ಆಡಳಿತ ಮಂಡಳಿಯ ಸದಸ್ಯರು, ಹಾಗೂ ಘಟಕದ ಸದಸ್ಯರು ಪಾಲ್ಗೊಂಡಿದ್ದರು.