ಪುತ್ತೂರು: ಸವಣೂರು ಮೆಸ್ಕಾಂ ವ್ಯಾಪ್ತಿಯ ಕುದ್ಮಾರು ಗ್ರಾಮದ ಅಡೀಲು ಅಂಗನವಾಡಿ ಸಮೀಪ ಭಾರಿ ಗಾಳಿಗೆ ಮರವೊಂದು ಬಿದ್ದು, ವಿದ್ಯುತ್ ಕಂಬ ತಂಡಾದ ಘಟನೆ ಜು.26ರಂದು ಸಂಜೆ ನಡೆದಿದೆ. ಈ ಘಟನೆಯಿಂದ ಇಲ್ಲಿಯ ಮೂವತ್ತಕ್ಕೂ ಹೆಚ್ಚು ಮನೆಯವರಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಸ್ಥಳಕ್ಕೆ ಸವಣೂರು ಮೆಸ್ಕಾಂ ಜೆಇ ರಾಜೇಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ. ಪರಿಶೀಲನೆ ನಡೆಸಿದ್ದಾರೆ.
