ಚೆಸ್: ವಿವೇಕಾನಂದ ಆ.ಮಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು:ಶಾಲಾ ಶಿಕ್ಷಣ ಇಲಾಖೆ ಹಾಗೂ ವಿದ್ಯಾರಶ್ಮೀ ವಿದ್ಯಾಲಯ, ಸವಣೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಹಲವು ಬಹುಮಾನ ಪಡೆದು, ಆ.18 ರಂದು ವಾಣಿ ವಿದ್ಯಾಸಂಸ್ಥೆ, ಬೆಳ್ತಂಗಡಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ  ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಬಾಲಕರ ವಿಭಾಗದಲ್ಲಿ ಹರ್ಷಿನ್ ವೈ, 9ನೇ ತರಗತಿ (ದೇವಪ್ಪಗೌಡ ಹಾಗೂ ಕುಸುಮ ದಂಪತಿಗಳ ಪುತ್ರ), 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಾನ್ವಿ ಚನಿಲ, 10ನೇ ತರಗತಿ (ರಘುರಾಮಚಂದ್ರ ಚನಿಲ ಹಾಗೂ ಸಂಧ್ಯಾ ಪಿ ಎಂ ದಂಪತಿಗಳ ಪುತ್ರಿ), ಅವನಿ ರೈ, 10ನೇ ತರಗತಿ (ನವೀನ್ ಪ್ರಸಾದ್ ರೈ ಮತ್ತು ಭವ್ಯ ರೈ ದಂಪತಿಗಳ ಪುತ್ರಿ), 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಕೌಶಿಕ್, 6ನೇ ತರಗತಿ (ಶಿವರಾಮ ಮತ್ತು ರಜನಿ ದಂಪತಿಗಳ ಪುತ್ರ), ಮತ್ತು 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪೂರ್ಣ.ಕೆ, 8ನೇ ತರಗತಿ(ಕೋಟ್ರೇಶ್ ಹಾಗೂ ರಜನಿ ದಂಪತಿಗಳ ಪುತ್ರಿ) ಇವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here