ಪುತ್ತೂರು ಸಂತ್ರಸ್ತೆಯಿಂದ ಹಣ ಪಡೆದು ವಂಚನೆ ಆರೋಪ – ವಂಚಿತನನ್ನು ತರಾಟೆಗೆತ್ತಿ ಹಣ ವಾಪಾಸ್ ಕೊಡಿಸಿದ ಪ್ರತಿಭಾ ಕುಳಾಯಿ ; ವಾಯ್ಸ್ ವೈರಲ್ !

0


ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣದ ಸಂತ್ರಸ್ತೆಗೆ ಮಹಿಳಾ ಆಯೋಗದಲ್ಲಿ ನ್ಯಾಯ ಕೊಡಿಸುವುದಾಗಿ ವ್ಯಕ್ತಿಯೊಬ್ಬರು ಸಂತ್ರಸ್ತೆಯ ತಾಯಿಯಿಂದ ಹಣ ಪಡೆದು ವಂಚಿಸಿರುವ ಮತ್ತು ಮಾಹಿತಿ ತಿಳಿದ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ವಂಚಿತನನ್ನು ತರಾಟೆಗೆತ್ತಿಕೊಂಡು ಸಂತ್ರಸ್ತೆಯ ತಾಯಿಗೆ ಹಣ ವಾಪಾಸ್ ಕೊಡಿಸುವ ಕುರಿತು ಸಂಭಾಷಣೆಯ ಆಡಿಯೋವೊಂದು ವೈರಲ್ ಆಗಿರುವುದು ಬೆಳಕಿಗೆ ಬಂದಿದೆ.


ಮಹಿಳಾ ಆಯೋಗದಲ್ಲಿ ನ್ಯಾಯ ಕೊಡಿಸುವುದಾಗಿ ಸಂತ್ರಸ್ತೆಯ ತಾಯಿಯಿಂದ ಲತೀಶ್ ಕುಂದಾರ್ ಎಂಬ ವ್ಯಕ್ತಿಯೊಬ್ಬರು ರೂ. 60ಸಾವಿರ ಪಡೆದಿದ್ದರು ಎನ್ನಲಾಗಿದೆ. ಈ ಕುರಿತು ಮಾಹಿತಿ ಅರಿತು ಪ್ರತಿಭಾ ಕುಳಾಯಿ ಅವರು ಲತೀಶ್ ಕುಂದಾರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತರಾಟೆಗೆತ್ತಿಕೊಂಡು ತಕ್ಷಣ ಸಂತ್ರಸ್ತೆಯ ಮನೆಗೆ ಹೋಗಿ ಹಣ ಹಿಂದಿರುಗಿಸುವಂತೆ ತಿಳಿಸಿದ್ದಾರೆ. ಇಲ್ಲವಾದಲ್ಲಿ ಪತ್ರಿಕಾಗೋಷ್ಟಿ ಕರೆದು ಎಲ್ಲರಿಗೂ ತಿಳಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

ಲತೀಶ್ ಕುಂದಾರ್ ಅನ್ನುವ ವ್ಯಕ್ತಿ ಸಂತ್ರಸ್ತೆಯ ಮನೆಗೆ ಹೋಗಿ ಹಣ ಕೊಟ್ಟಿರುವ ವಿಚಾರವನ್ನು ಮತ್ತೆ ಪ್ರತಿಭಾ ಕುಳಾಯಿ ಅವರಿಗೆ ತಿಳಿಸುವ ವೇಳೆ ಚೆಕ್ ಕೊಟ್ಟಿರುವುದಕ್ಕೆ ಆಕ್ರೋಶಗೊಂಡು 15 ತಾರೀಕಿನ ಒಳಗೆ ಹಣ ಕೊಡಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಅತ್ತ ಕಡೆಯಿಂದ ನಾನು ಕೊಟ್ಟ ಚೆಕ್ 14 ತಾರೀಕಿಗೆ ಹಾಕಬಹುದು ಎಂದು ಲತೀಶ್ ಕುಂದಾರ್ ತಿಳಿಸಿರುವ ಆಡಿಯೋವೊಂದು ಇದೀಗ ವೈರಲ್ ಆಗಿದೆ.

LEAVE A REPLY

Please enter your comment!
Please enter your name here