ಪುತ್ತೂರು: ಸ್ಕೂಟರ್ ಒಳಗಡೆ ನಾಗರ ಹಾವೊಂದು ಅಡಗಿ ಕೂತಿದ್ದು, ಸ್ಕೂಟರ್ ಬಿಡಿಭಾಗಗಳನ್ನು ತೆಗೆಯುವ ಮೂಲಕ ನಾಗರಾಜನ ರಕ್ಷಣೆ ಮಾಡಿದ ಪ್ರಸಂಗ ನಡೆದಿದೆ.

ಪುತ್ತೂರಿನ ದರ್ಬೆಯಲ್ಲಿ ಈ ಘಟನೆ ನಡೆದಿದ್ದು, ಅಂಚೆ ಇಲಾಖೆ ನೌಕರರೊಬ್ಬರ ಸ್ಕೂಟರ್ ಒಳಗಡೆ ನಾಗರ ಹಾವೊಂದು ಅಡಗಿತ್ತು. ಈ ಬಗ್ಗೆ ತಿಳಿದ ಕೂಡಲೇ ಸ್ಕೂಟರ್ ಬಿಡಿಭಾಗಗಳನ್ನು ತೆಗೆಯುವ ಮೂಲಕ ನಾಗರಾಜನನ್ನು ರಕ್ಷಿಸಲಾಯಿತು.