ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ‘ಎಕ್ಸೆಲೆನ್ಸಿಯಾ’ ವಿನೂತನ ಕಾರ್ಯಕ್ರಮ

0

ವಿವಿಧ ಕ್ಷೇತ್ರಗಳ ಸಾಧಕರಿಂದ ವಿದ್ಯಾರ್ಥಿಗಳ ಜೊತೆ ಸಂವಾದ, ಸಾಧನೆಗೆ ಪ್ರೇರೇಪಣೆ
ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ-ಸಾಧಕರ ಅಭಿಮತ

ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಎಕ್ಸೆಲೆನ್ಸಿಯಾ-2025 ವಿನೂತನ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ ಆ.15ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಿತು. ಉದ್ಯಮಿ ಹಾಜಿ ಅಬ್ದುಲ್ ಸಲೀಂ ಪೋಳ್ಯ ಧ್ವಜಾರೋಹಣ ನೆರವೇರಿಸಿದರು. ನಂತರ ಬಾಲಕ/ಬಾಲಕಿಯರಿಗೆ ಪ್ರತ್ಯೇಕ ಕಾರ್ಯಕ್ರಮ ನಡೆಯಿತು.


ಬೆಳಿಗ್ಗೆ ನಡೆದ ‘ಪ್ರೌಡ್ ಪೇರೆಂಟ್ ಅವಾರ್ಡ್’ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಮ್ಮದ್ ಶೌಕತ್ ಅಝೀಂ(ಐಎಎಸ್) ಅವರ ಹೆತ್ತವರಾದ ಶೇಕ್ ಅಬ್ದುಲ್ ಹಾಗೂ ಮೈಮೂನ ನೆರವೇರಿಸಿದರು. ಇಇಎಫ್ ಉಪಾಧ್ಯಕ್ಷ ಅಬ್ದುಲ್ಲ ಶೇಕ್ ಕುಂಬ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ 17 ಮಂದಿ ಹೆಮ್ಮೆಯ ಪೋಷಕರಿಗೆ ‘ಪ್ರೌಡ್ ಪೇರೆಂಟ್’ ಅವಾರ್ಡ್ ನೀಡಿ ಗೌರವಿಸಲಾಯಿತು. ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೌದಿ ಅರೇಬಿಯಾದ ರಖ್ವಾನಿ ಕಂಪೆನಿಯ ಸಿಇಒ ಅಬ್ದುಲ್ ಸಲಾಂ ಹುಸೈನ್, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮುಹಮ್ಮದ್ ಹಾಜಿ, ವಿಟ್ಲ ಹೊರಿಝೋನ್ ಆಂಗ್ಲ ಮಾದ್ಯಮ ಶಾಲೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಹಳೆಮನೆ, ಬೆಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧೀಕ್ಷಕ ನಾಸಿರ್ ಹುಸೈನ್, ಸೌದಿ ಅರೇಬಿಯಾ ಅಲೈಮಿಟೆಕ್‌ನ ಸಿಇಒ ಮುಹಮ್ಮದ್ ನಸೀರ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉಮರ್ ಕುಂಞಿ ನಡ್ಜೆ, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಹಿರಿಯ ಪತ್ರಕರ್ತ ಹಮೀದ್ ಪುತ್ತೂರು, ಮೀಫ್ ಉಪಾಧ್ಯಕ್ಷ ಮುಸ್ತಫಾ ಸುಳ್ಯ, ಸಾಲ್ಮರ ದಾರುಲ್ ಹಸನಿಯಾ ಸಂಸ್ಥೆಯ ಹಸನ್ ಹಾಜಿ ಪುತ್ತೂರು, ಮಂಗಳೂರು ಎಸಿಇ ಐಎಎಸ್ ಅಕಾಡೆಮಿಯ ನಿರ್ದೇಶಕ ನಝೀರ್ ಅಹ್ಮದ್‌ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಕ ಹಾಜಿ ಮುಹಮ್ಮದ್ ಕುಕ್ಕುವಳ್ಳಿ, ನ್ಯಾಯವಾದಿ ಮತ್ತು ನೋಟರಿ ಶೇಖ್ ಇಸಾಕ್ ಕಡಬ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರ.ಕಾರ್ಯದರ್ಶಿ ಹಾಜಿ ಬಶೀರ್ ಇಂದ್ರಾಜೆ, ಸಾಲ್ಮರ ಮೌಂಟೆನ್ ವ್ಯೂ ಶಿಕ್ಷಣ ಸಂಸ್ಥೆಯ ಸಂಚಾಲಕ ಮೊಹಮ್ಮದ್ ಸಾಬ್ ಭಾಗವಹಿಸಿದ್ದರು.

ಸಾಧಕರೊಂದಿಗೆ ವಿದ್ಯಾರ್ಥಿಗಳ ಸಂವಾದ:
ಅಪರಾಹ್ನ ‘ಎ ಡೇ ವಿತ್ ಇನ್ಸ್ಪೈರಿಂಗ್ ಮೈಂಡ್ಸ್’ ಕಾಯಕ್ರಮ ನಡೆಯಿತು. ಜನಪ್ರಿಯಾ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಚೇರ್‌ಮೆನ್ ಡಾ.ಅಬ್ದುಲ್ ಬಶೀರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಅಬು ಸಾಲಿಯಾ ಖಾನ್ (ಯುಪಿಎಸ್‌ಸಿ ಎಐಆರ್ 588 & ಐಎಫ್‌ಒಎಸ್ ಎಐಆರ್ 107), ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಉಪನಿರ್ದೇಶಕಿ ಅಸ್ಮಾ ಕೆ, ನೋವಿಗೊ ಸೊಲ್ಯೂಷನ್ಸ್‌ನ ಸಹಸಂಸ್ಥಾಪಕರು ಮತ್ತು ಸಿಸಿಒ ಆಗಿರುವ ಶಿಹಾಬ್ ಕಲಂದರ್, ಚಾರ್ಟರ್ಡ್ ಅಕೌಂಟೆಂಟ್ ಸಿಎ ತಬಿಶ್ ಹಸನ್, ಕಾಸರಗೋಡು ಉದ್ಮಾ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ನಾಜಿಹ್ ಅಹ್ಮದ್, ಎಂ.ಟೆಕ್, ಐಐಟಿ ಮದ್ರಾಸ್, ಎಲ್&ಟಿ ಬೆಂಗಳೂರು ಇದರ ಹಿರಿಯ ಇಂಜಿನಿಯರ್ ಶೇಖ್ ಮೊಹಮ್ಮದ್ ಜುನೈನ್, ಬೆಂಗಳೂರು ಆಚಾರ್ಯ ಸಂಸ್ಥೆಯ ಮನೋವಿಜ್ಞಾನ ಸಹಾಯಕ ಪ್ರಾಧ್ಯಾಪಕರಾದ ಮೊಹಮ್ಮದ್ ಸ್ವರೂಪ್, ವಿಟಿಯುನಿಂದ ದಾಖಲೆಯ 16 ಚಿನ್ನದ ಪದಕಗಳನ್ನು ಗಳಿಸಿದ ಗೋಲ್ಡನ್ ಗರ್ಲ್ ಖ್ಯಾತಿಯ ಬುಷ್ರಾ ಮತೀನ್ ರಾಯಚೂರು ಮೊದಲಾದವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ, ತಮ್ಮ ಅನುಭವಗಳನ್ನು ಬಿಚ್ಚಿಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು. ಡಾ.ವಾಜಿದ ಕಾರ್ಯಕ್ರಮ ನಿರ್ವಹಿಸಿದರು.

ಅದೃಷ್ಟ ಬಹುಮಾನ:
ಎಕ್ಸೆಲೆನ್ಸಿಯಾ ಕಾರ್ಯಕ್ರಮ ಪ್ರಯಕ್ತ ಹಮ್ಮಿಕೊಂಡಿದ್ದ ಅದೃಷ್ಟ ಚೀಟಿ ಎತ್ತುವಿಕೆಯಲ್ಲಿ ಲಕ್ಕಿ ಮದರ್, ಲಕ್ಕಿ ಫಾದರ್, ಲಕ್ಕಿ ಬಾಯ್ ಹಾಗೂ ಲಕ್ಕಿ ಗರ್ಲ್ ಬಹುಮಾನವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಸ್ಟೂಡೆಂಟ್ ಸ್ಟಾರ್ ಪರ್ಫಾಮೆನ್ಸ್ ಅವಾರ್ಡ್ ನೀಡಿ ಗೌರವಿಸಲಾಯಿತು.

ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗಿ:
ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ವಿದ್ಯಾರ್ಥಿಗಳ ಪೋಷಕರು, ವಿದ್ಯಾಭಿಮಾನಿಗಳು ಕೂಡಾ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಚೇರ್‌ಮೆನ್ ಅಮ್ಜದ್ ಖಾನ್ ಪೋಳ್ಯ ಮಾತನಾಡಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ 25 ಲಕ್ಷ ರೂ ಸ್ಕಾಲರ್‌ಶಿಪ್ ವಿತರಿಸಲಾಗಿದ್ದು ಶೈಕ್ಷಣಿಕವಾಗಿ ಸಮುದಾಯದ ವಿದ್ಯಾರ್ಥಿಗಳನ್ನು ಸಾಧಕರನ್ನಾಗಿ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಗತಗೊಳಿಸುತ್ತಿದ್ದೇವೆ, ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಬಲೀಕರಣಗೊಳ್ಳುವುದು ಮತ್ತು ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವುದು ಕಾಲದ ಬೇಡಿಕೆಯಾಗಿದೆ, ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here