ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.27ರಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ 108 ಕಾಯಿ ಗಣಪತಿ ಹೋಮ ಮತ್ತು ಮೋದಕ ಹೋಮ ನಡೆಯಿತು.
ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ವೈದಿಕತ್ವದಲ್ಲಿ ಗಣಪತಿ ಗುಡಿಯ ಬಳಿ 108 ಕಾಯಿ ಗಣಪತಿಹೋಮ ಮತ್ತು ಗಣಪತಿ ಗುಡಿ ಮುಂದೆ ವೇ ಮೂ ಜಯರಾಮ ಜೋಯಿಷ ಅವರ ವೈದಿಕತ್ವದಲ್ಲಿ ಮೋದಕ ಹೋಮ ನಡೆಯಿತು.

ನಿತ್ಯವು ದೇವರ ಅಣುಸಂದಾನ ಆದಾಗ ಅನುಗ್ರಹ ಪ್ರಾಪ್ತಿ:
ಮೋದಕ ಹೋಮ ನೆರವೇರಿಸಿದ ವೇ ಮೂ ಜಯರಾಮ ಜೋಯಿಷ ಅವರು ಪೂರ್ಣಾಹುತಿಯ ಸಂದರ್ಭ ಪ್ರಾರ್ಥನೆ ಮಾಡಿದರು. ನಿತ್ಯವು ದೇವರ ಅಣುಸಂಧಾನ ಆದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ದೇವರು ಬೆಳಕಿನ ಸ್ವರೂಪ. ಈ ನಿಟ್ಟಿನಲ್ಲಿ ಒಂದೊಂದು ಸೇವೆ ಒಂದು ದೇವರಿಗೆ ಬೇರೆ ಬೇರೆ ಸ್ವರೂಪದಲ್ಲಿ ಇರುತ್ತದೆ. ಅದೇ ರೀತಿ ಗಣಪತಿಗೆ ಮೋದಕ ಹೋಮ ಸೇವೆಯಿಂದ ಎಲ್ಲರ ಕಷ್ಟ ಕಾರ್ಪಣ್ಯ ದೂರಿಕರಿಸಲಿ ದೇಶಕ್ಕೆ ಸುಮಂಗಲವಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಪಂಚಗ್ಯಾರೆಂಟಿ ಅನುಷ್ಠಾನದ ತಾಲೂಕು ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.