ಪುತ್ತೂರು: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ 1500ನೇ ಜನ್ಮದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ) ಮತ್ತು ಮಿಲಾದ್ ಸಮಿತಿ ಪುತ್ತೂರು ಜಂಟಿ ಆಶ್ರಯದಲ್ಲಿ 33ನೇ ಮಿಲಾದ್ ಸಮಾವೇಶ ಹಾಗೂ ನಾತೇ ಶರೀಫ್, ಆಕರ್ಷಣೆಯ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಲಾಯಿತು.

ದರ್ಬೆ ಪ್ರವಾಸಿ ಮಂದಿರದಿಂದ ಆಕರ್ಷಣೀಯ ಕಾಲ್ನಡಿಗೆ ಜಾಥಾವು ದಫ್ ತಂಡಗಳೊಂದಿಗೆ ವೈವಿಧ್ಯಮಯ ಇಸ್ಲಾಮಿಕ್ ಕಲಾ ಸಾಹಿತ್ಯ ಪ್ರದರ್ಶನದೊಂದಿಗೆ ಕಿಲ್ಲೆ ಮೈದಾನಕ್ಕೆ ಬರಲಿದೆ. ಕಿಲ್ಲೆ ಮೈದಾನದಲ್ಲಿ ಮರ್ಹೂಂ ಸಾಲ್ಮರ ಅಬ್ಬು ಹಾಜಿ ಮತ್ತು ಸಹೋದರರು ವೇದಿಕೆಯಲ್ಲಿ ಮೀಲಾದ್ ಸಮಾವೇಶ ಜರುಗಲಿದೆ.