ಪುತ್ತೂರು:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಸ. ಪ. ಪೂ. ಕಾಲೇಜು, ಕಾಣಿಯೂರು ಆಶ್ರಯದಲ್ಲಿ ಕಾಣಿಯೂರು ಸ.ಪ.ಪೂ.ಕಾಲೇಜಿನಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರೌಢಶಾಲಾ ತ್ರೋಬಾಲ್ ಪಂದ್ಯಾಟದಲ್ಲಿ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದಲ್ಲಿ ವಿಹಾಂತ್, ನಿರ್ಮಯ್, ಲೋಹಿತ್, ವೆಟ್ರಿವೆಲ್, ನಿಶಾಂತ್, ಜೀವನ್, ಲುಕೇಶ್, ಓಂಕಾರ್, ಕುಶಾಲ್, ನಭ್ಯತ್, ಸಂಜಯ್, ಪ್ರತೀಕ್ ಪಾಲ್ಗೊಂಡಿದ್ದರು.
ನಿಶಾಂತ್ ಎಚ್ ವಿ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯ ಪ್ರಸನ್ನ ಕೆ ತಿಳಿಸಿರುತ್ತಾರೆ. ಸಂಸ್ಥೆಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು ತರಬೇತಿಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ಜಯಚಂದ್ರ ಮತ್ತು ಸುದೀಕ್ಷಾರವರನ್ನು ಹಾಗೂ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.