ರೆಂಜ ಶ್ರೀರಾಮನಗರ ಅಯ್ಯಪ್ಪ ಭಜನಾ ಮಂದಿರ

0

ಅಧ್ಯಕ್ಷ: ಸತೀಶ್‌ ಗೌಡ ಪಾರ, ಕಾರ್ಯದರ್ಶಿ: ಅಂಕಿತ್‌ ಕೆ.ಆರ್‌., ಕೋಶಾಧಿಕಾರಿ: ರವಿನಾಥ ಕೋನಡ್ಕ

ಪುತ್ತೂರು: ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಂದಿರದಲ್ಲಿ ನಡೆಯಿತು.

ಇದೇ ವೇಳೆ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕೊಮ್ಮಂಡ, ಅಧ್ಯಕ್ಷರಾಗಿ ರೆಂಜ ವಿಘ್ನೇಶ್ವರ ಟ್ರೇಡರ್ಸ್‌ನ ಮ್ಹಾಲಕ ಸತೀಶ್‌ ಗೌಡ ಪಾರ, ಪ್ರಧಾನ ಕಾರ್ಯದರ್ಶಿಯಾಗಿ ಅಂಕಿತ್‌ ಕೆ.ಆರ್.‌ ಕೋನಡ್ಕ, ಕೋಶಾಧಿಕಾರಿಯಾಗಿ ರವಿನಾಥ ಕೋನಡ್ಕ, ಸಂಚಾಲಕರಾಗಿ ಕೃಷ್ಣಪ್ಪ ಗೌಡ ಗುರುಸ್ವಾಮಿ, ಉಪಾಧ್ಯಕ್ಷರುಗಳಾಗಿ ಪ್ರಕಾಶ್‌ ರೈ ಬೈಲಾಡಿ, ಜಗನ್ನಾಥ ರೈ ಕೊಮ್ಮಂಡ, ಶೇಷಪ್ಪ ರೈ ಮೂರ್ಕಾಜೆ, ಜಯರಾಮ ರೈ ಆನಾಜೆ, ದುರ್ಗಾಪ್ರಸಾದ್‌ ಪಾರ, ದುಗ್ಗಪ್ಪ ನಾಯ್ಕ್‌ ಕಜೆ, ವಿಜಯ ಗೌಡ ಪಾರ, ಜೊತೆ ಕಾರ್ಯದರ್ಶಿಗಳಾಗಿ ಕೃತೇಶ್‌ ಕೆ., ಅಜಿತ್‌ ಡಿ., ಪುನಿತ್‌ ರಾಜ್‌, ಹೇಮಂತ್‌ ಕೋನಡ್ಕ, ವಿಜಯ್‌ ಮಿತ್ತಡ್ಕ, ರೂಪೇಶ್‌ ಮಿತ್ತಡ್ಕರವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಬೆಟ್ಟಂಪಾಡಿ ಗ್ರಾ,ಪಂ.  ಉಪಾಧ್ಯಕ್ಷ ಮಹೇಶ್‌ ಕೋರ್ಮಂಡ, ಚೇತನ್‌ ರೆಂಜ, ತುಷಾರ್‌ ಕಜೆ, ಪುನಿತ್‌ ಮಿತ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here