ಪುತ್ತೂರು: ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ರಕ್ತೇಶ್ವರಿ, ಪಂಜುರ್ಲಿ, ಕಲ್ಲುರ್ಟಿ-ಕಲ್ಕುಡ, ನೆತ್ತರ್ಕಣ್ ಮತ್ತು ಪರಿವಾರ ದೈವಗಳ ದೈವಸ್ಥಾನ ಮತ್ತು ಸುವರ್ಣ ಕುಟುಂಬಸ್ಥರ ತರವಾಡು ಮನೆ ಆಡಳಿತ ಟ್ರಸ್ಟ್ (ರಿ.) ಬಳಂತಿಮೊಗರು ಪುಣಚ ಇದರ ಸುವರ್ಣ ತರವಾಡು ಮನೆಗೆ ಕೊಟ್ಯದ ಅಪ್ಪೆ ಯಾನೆ ಲೀಲಾ ಹೆಂಗ್ಸು ಒಂದು ಎಕರೆ ಜಾಗವನ್ನು ದಾನದ ರೂಪದಲ್ಲಿ ದೈವಸ್ಥಾನದ ಹೆಸರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು