ನಿಡ್ಪಳ್ಳಿ; ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು, ಪಾಣಾಜೆ ಇದರ ವತಿಯಿಂದ 36 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ ಅ.2 ರಂದು ಆರ್ಲಪದವು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಠಾರದಲ್ಲಿ ಜರಗಲಿದೆ.
ಬೆಳಿಗ್ಗೆ ಗಂಟೆ 8.30 ರಿಂದ ಗಣಪತಿ ಹವನ ಶ್ರೀ ಕಾರ್ತಿಕೇಯ ಭಜನಾ ಸಂಘ ಆರ್ಲಪದವು ಇವರಿಂದ ಭಜನಾ ಕಾರ್ಯಕ್ರಮ.ಗಂಟೆ 10.45 ರಿಂದ ಆಯುಧಪೂಜೆ, ಅಕ್ಷರಾರಂಭ ನಡೆಯಲಿದೆ.ಗಂಟೆ 11 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ- ಬಹುಮಾನ ವಿತರಣೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 2 ರಿಂದ ಗಾನ ವೈಭವ.ಸಂಜೆ ಗಂಟೆ 4.30 ರಿಂದ ದಿವ್ಯಜ್ಯೋತಿ ಕಲಾವಿದರು ಎರುಂಬು ಅಭಿನಯಿಸುವ ಹಾಸ್ಯಮಯ ನಾಟಕ ” ಮದಿಮೆದ ಇಲ್ಲಡ್” ನಡೆಯಲಿದೆ.
ಸಂಜೆ ವೈಭವದ ಶೋಭಾಯಾತ್ರೆ;- ಸಂಜೆ ಗಂಟೆ 7 ರಿಂದ ಮಹಾಪೂಜೆ, ಶೋಭಾಯಾತ್ರೆ ನಡೆಯಲಿದೆ.ವಿಶೇಷ ಆಕರ್ಷಣೆಯಾಗಿ ಶ್ರೀ ಮಣಿಕಂಠ ಸಿಂಗಾರಿ ಮೇಳ ಶ್ರೀ ರಾಮನಗರ, ರೆಂಜ ಇವರಿಂದ ವಯಲಿನ್ ವಾದನದೊಂದಿಗೆ ಸಿಂಗಾರಿ ಮೇಳ, ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.