ಪುತ್ತೂರು: ತೆಂಕಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪುಷ್ಪಾ ಸ್ಕ್ವೇರ್ನಲ್ಲಿ ಫೋಟೋಗ್ರಫಿ ವಿಡಿಯೋಗ್ರಫಿ ಮತ್ತು ಎಡಿಟಿಂಗ್ ಸ್ಟುಡಿಯೊ ಸ್ಟೋರಿ ಬೈ ಧನು ಅ.2 ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.
ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದು, ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕರಾದ ಸಹಜ್ ರೈ ಬಳಜ್ಜ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಯು.ಪಿ.ಶಿವಾನಂದ,ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಪುತ್ತೂರು ಇದರ ಮಾಲಕರಾದ ಸೀತಾರಾಮ ರೈ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇದರ ಪುತ್ತೂರು ವಲಯದ ಅಧ್ಯಕ್ಷರಾದ ಜಯಂತ ಗೌಡ ಕರ್ಕುಂಜ,ಪುಪ್ಪ ಸ್ಕ್ವೇರ್ ನ ಮಾಲಕರಾದ ಅಭಿಜಿತ್ ನಾಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದು ಸಂಸ್ಥೆಯ ಮಾಲಕರಾದ ಧನುಷ್ ಮತ್ತು ನಾಗೇಂದ್ರ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.