ಪುಣಚ: ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ 43ನೇ ವರ್ಷದ ಶ್ರೀ ಶಾರದೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.1 ಮತ್ತು 2ರಂದು ಸಂಭ್ರಮ ಸಡಗರದಿಂದ ನಡೆಯಿತು.

ಅ.1ರಂದು ಬೆಳಿಗ್ಗೆ ಚಂದ್ರಶೇಖರ ಭಟ್ ಮುಂಡುಗಾರುರವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ಧ್ವಜಾರೋಹಣ, ಶಾರದಾ ಪ್ರತಿಷ್ಠೆ , ವಿವಿಧ ತಂಡಗಳಿಂದ ಭಜನಾರಂಭ, ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಆರಂಭ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ 6:30ರಿಂದ ಶ್ರೀದೇವಿ ಶಿಶು ಮಂದಿರ ಮತ್ತು ದೇವಿನಗರ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆದು ರಂಗಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ 10ರಿಂದ ಯುವವೃಂದ ದೇವಿನಗರ ಇವರ ಪ್ರಾಯೋಜಕತ್ವದಲ್ಲಿ ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರಿಂದ ‘ತೆಲಿಕೆದ ಬರ್ಸ’ ನಡೆಯಿತು.
ಅ.2ರಂದು ಬೆಳಿಗ್ಗೆ ಪೂಜಾರಂಭ, ಭಜನಾರಂಭ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಶ್ರೀದೇವಿ ಮಹಿಳಾ ಯಕ್ಷಗಾನ ಮಂಡಳಿ ದೇವಿನಗರ ಪುಣಚ ಇವರಿಂದ ಯಕ್ಷಗಾನ ಪ್ರಸಂಗ ‘ಚಕ್ರಚಂಡಿಕೆ’ ನಡೆಯಿತು.
ಶೋಭಾಯಾತ್ರೆ: ಸಾಯಂಕಾಲ ದೇವಿನಗರದಿಂದ ಹೊರಟ ಶ್ರೀ ಶಾರದ ಮಾತೆಯ ವೈಭವೊಪೇತ ಶೋಭಾಯಾತ್ರೆ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಆಕರ್ಷಣೆಯ ಚೆಂಡೆವಾದನದೊಂದಿಗೆ ಪುಣಚ ಪರಿಯಾಲ್ತಡ್ಕ ಮಾರ್ಗವಾಗಿ ಸಾಗಿ ಅಜ್ಜಿನಡ್ಕ, ನೀರ್ಕಜೆ ಖಂಡಿಗ ಕ್ಷೇತ್ರದ ಕೆರೆಯಲ್ಲಿ ಜಲಸ್ತಂಭನಗೊಂಡಿತು.