ಬುಡೇರಿಯಾ ಕೆದಿಲ ಶಿರಾಡಿ ದೈವಸ್ಥಾನದಲ್ಲಿ ಪುದ್ವಾರ್ ಮೆಚ್ಚಿ

0

ಆಲಂಕಾರು: ಆಲಂಕಾರು ಗ್ರಾಮದ ಬುಡೇರಿಯಾ ಕೆದಿಲ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಅ.17ರಂದು ಪುದ್ವಾರ್ ಮೆಚ್ಚಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ತುಲಾ ಸಂಕ್ರಮಣ ಪ್ರಯುಕ್ತ ಬೆಳಿಗ್ಗೆ ದೈವಸ್ಥಾನದಲ್ಲಿ ತೆನೆ ಕಟ್ಟಿದ ನಂತರ ಆಲಿಚಾಮುಂಡಿ ದೈವಕ್ಕೆ ತಂಬಿಲ ನಡೆದು ಗ್ರಾಮದೈವ ಶಿರಾಡಿ ಮತ್ತು ಗುಳಿಗ ದೈವದ ಭಂಡಾರ ತೆಗೆದು ಗ್ರಾಮದೈವ ಶ್ರೀ ಶಿರಾಡಿ ಮತ್ತು ಗುಳಿಗ ದೈವದ ಪುದ್ವಾರ್ ಮೆಚ್ಚಿಯ ನೇಮೋತ್ಸವ ನಡೆಯಿತು.

ದೈವಗಳಿಗೆ ಹೊಸಕ್ಕಿಯ ಅರಳನ್ನು ಸಮರ್ಪಣೆ ಮಾಡುವುದರೊಂದಿಗೆ ಪುದ್ವಾರ್ ಮೆಚ್ಚಿಯ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.ಅಗಮಿಸಿದ ಭಕ್ತಾದಿಗಳು ದೈವಕ್ಕೆ ಪ್ರಾರ್ಥನೆ ,ಅಗೇಲು ಸೇವೆ ಸಲ್ಲಿಸಿ, ದೈವದ ಬೂಲ್ಯ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಹೊಸ ಮಜಲು ಹಾಗು ಪ್ರಮುಖ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here