ಕ್ರೀಡಾಕೂಟ : ಸಾಂದೀಪನಿ ಶಾಲೆ ಹಲವು ಪ್ರಶಸ್ತಿಗಳೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರ್ ಇಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನರಿಮೊಗರು ಸಾಂದೀಪನಿ ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಗುರು ಕಿರಣ್ 10ನೇ ತರಗತಿ -ಜಾವಲಿನ್ ಎಸೆತ ತೃತೀಯ,400 ಮೀ ಓಟ ದ್ವಿತೀಯ,4*400 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಯತೀರಾಜ್ 10ನೇ ತರಗತಿ-ತ್ರಿಪಲ್ ಜಂಪ್ ದ್ವಿತೀಯ, 4*400 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ತುಷಾರ್ 10ನೇ ತರಗತಿ-4*400 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ದರ್ಶನ್ 10ನೇ ತರಗತಿ-4*400ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆರ್ಯನ್ ಕುಮಾರ್ 8ನೇ ತರಗತಿ-ಡಿಸ್ಕಸ್ ಎಸೆತದಲ್ಲಿ ದ್ವಿತೀಯ,ಶಾಟ್‌ ಪುಟ್‌ ನಲ್ಲಿ ಪ್ರಥಮ,4*100 ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಲೇಖನ್ 8ನೇ ತರಗತಿ-4*100 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಭಿನ್ 8 ನೇ ತರಗತಿ-ಹೈ ಜಂಪ್ ನಲ್ಲಿ ಪ್ರಥಮ,400ಮೀ ಓಟ ದ್ವಿತೀಯ, 4*100 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿಷ್ಣುಜಿತ್ 7ನೇ ತರಗತಿ-4*100 ರಿಲೇ ಪ್ರಥಮ ಸ್ಥಾನ, ಆಯುಷ್ 7ನೇ ತರಗತಿ-ಲಾಂಗ್ ಜಂಪ್ ತೃತೀಯ,ಆನ್ಯ 8ನೇ ತರಗತಿ-100 ಮಿ ಓಟ ತೃತೀಯ ,200 ಮಿ ಓಟ ದ್ವಿತೀಯ ಸ್ಥಾನ, ಹಸ್ತಾ ಶೆಟ್ಟಿ 9ನೇ ತರಗತಿ-ಹೈ ಜಂಪ್ ಪ್ರಥಮ,ತ್ರಿಪಲ್ ಜಂಪ್ ಪ್ರಥಮ,4*400 ರಿಲೇ ದ್ವಿತೀಯ ಸ್ಥಾನ, ಸಾನ್ವಿಕಾ 9ನೇ ತರಗತಿ-ಜಾವಲಿನ್ ತ್ರೋ ದ್ವಿತೀಯ, ಡಿಸ್ಕಸ್ ತ್ರೋ ತೃತೀಯ,ಶಾಟ್ ಪುಟ್ ದ್ವಿತೀಯ‌ ಸ್ಥಾನ, ಅರ್ಪಿತಾ 9ನೇ ತರಗತಿ-ಲಾಂಗ್ ಜಂಪ್ ತೃತೀಯ, 4*400 ರಿಲೇ ದ್ವಿತೀಯ,ಗೌತಮಿ 9ನೇ ತರಗತಿ-4*400 ರಿಲೇ ದ್ವಿತೀಯ ಸ್ಥಾನ, ಅಂಜನಾ 8ನೇ ತರಗತಿ-ಶಾಟ್ ಪುಟ್ ದ್ವಿತೀಯ, ಬಿಂದು 10ನೇ ತರಗತಿ-4*400 ರಿಲೇ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಹಾಗೂ ಎಲ್ಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಕೆ ಅಭಿನಂದನೆ ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ಜಯ ಚಂದ್ರ ಹಾಗೂ ಸುದೀಕ್ಷ ರವರು ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here