ಕಾವು:ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾವು ಘಟಕ ಮತ್ತು ಗೋಪೂಜಾ ಸಮಿತಿ ಕಾವು ಇದರ ನೇತೃತ್ವದಲ್ಲಿ 14ನೇ ವರ್ಷದ ಸಾಮೂಹಿಕ ಗೋಪೂಜೆ,ಭಜನಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ಅ.26 ರಂದು ನಡೆಯಿತು.

ಸಂಜೆ ಗಂಟೆ 6.30ಕ್ಕೆ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯ ಇವರ ಪೌರೋಹಿತ್ಯದಲ್ಲಿ, ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗೋಪೂಜಾ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ಬಲ್ಯಾಯ ಕಾವು, ಅಧ್ಯಕ್ಷರಾದ ನಹುಷ ಭಟ್,ಕಾರ್ಯದರ್ಶಿ ಶಿವಕುಮಾರ್ ಕಾವು,ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ರಾವ್ ನಿಧಿಮುಂಡ, ಜಿಲ್ಲಾ ಸತ್ಸಂಗ ಪ್ರಮುಖ್ ರವಿಪ್ರಸಾದ್ ಕೈತಡ್ಕ, ಬಜರಂಗಳದ ಕಾವು ಘಟಕದ ಸಂಚಾಲಕ ಕಿರಣ್ ಕುಮಾರ್ ಕಾವು, ಗೋರಕ್ಷಾ ಪ್ರಮುಖ್ ವಿಶ್ವನಾಥ ಬಾಳೆಕೊಚ್ಚಿ , ವಿಶ್ವಹಿಂದೂ ಪರಿಷತ್ , ಬಜರಂಗದಳ, ಗೋಪೂಜಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಗೋಪೂಜೆ ಕಾರ್ಯಕ್ರಮದ ಮೊದಲಿಗೆ ಸಂಜೆ ಗಂಟೆ 5.30ರಿಂದ ದುರ್ಗಾವಾಹಿನಿ ಭಜನಾ ತಂಡ ಮಾಣಿಯಡ್ಕ,ಓಂ ಶ್ರೀ ಭಜನಾ ತಂಡ ಸಸ್ಪೆಟ್ಟಿ ಪಳನೀರು,
ಗೆಳೆಯರ ಬಳಗ ಭಜನಾ ತಂಡ ಕಾವು ಇವರುಗಳಿಂದ ಭಜನಾ ಸೇವೆ ನಡೆಯಿತು.