ಬೆಟ್ಟಂಪಾಡಿ: ಶ್ರೀ ಕ್ಷೇತ್ರ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವಗಳು ನ. 4 ರಿಂದ ಮೊದಲ್ಗೊಂಡು 7 ರವರೆಗೆ ನೆರವೇರಲಿದ್ದು, ಆ ಪ್ರಯುಕ್ತ ಊರ ಪರವೂರ ಭಕ್ತಾಭಿಮಾನಿಗಳಿಂದ ದೇವಾಲಯ ಸ್ವಚ್ಛಗೊಳಿಸುವ ಕಾರ್ಯ ಶ್ರಮದಾನ ನ.2 ರಂದು ನಡೆಯಿತು. 
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ ಬಲ್ಲಾಳ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ಊರ ಪರವೂರು ಭಕ್ತಾಭಿಮಾನಿಗಳು ಶ್ರಮದಾನದಲ್ಲಿ ಪಾಲ್ಗೊಂಡರು.
