ರಾಮಕುಂಜ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ,ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ,ಸಮೂಹ ಸಂಪನ್ಮೂಲ ಕೇಂದ್ರ ಕಡಬ ಇದರ ಆಶ್ರಯದಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜದಲ್ಲಿ ನಡೆದ ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.
ಶಾಲೆಯ ವಿದ್ಯಾರ್ಥಿಗಳಾದ ಪ್ರಣಮ್ಯ ಹೆಚ್ ಕೆ -ಸಂಸ್ಕೃತ ಧಾರ್ಮಿಕ ಪಠಣ ಮತ್ತು ಸಂಸ್ಕೃತ ಭಾಷಣ (ಪ್ರಥಮ), ಅನುಶ್ರೀ- ರಂಗೋಲಿ (ಪ್ರಥಮ), ತನ್ವಿಕೆ -ಪ್ರಬಂಧ ರಚನೆ (ಪ್ರಥಮ), ನವಮಿ -ಕವನ ವಾಚನ ( ದ್ವಿತೀಯ), ಸಿಂಚನ ಎಸ್ -ಕನ್ನಡ ಭಾಷಣ (ದ್ವಿತೀಯ), ಭವಿಷ್ಯ -ಇಂಗ್ಲಿಷ್ ಭಾಷಣ (ತೃತಿಯ), ಮಹಮ್ಮದ್ ಅಫ್ನಾನ್- ಅರೇಬಿಕ್ ಧಾರ್ಮಿಕ ಪಠಣ (ತೃತೀಯ), ತೇಜಸ್ ಡಿ ಕೆ-ಮಿಮಿಕ್ರಿ( ತೃತೀಯ), ಹರ್ಷ ಭಟ್ ಪಿ ಚರ್ಚಾ ಸ್ಪರ್ಧೆ (ತೃತೀಯ) , ರಸಪ್ರಶ್ನೆ-ಸರ್ವದ ಮತ್ತು ಜೋತಿಕ (ತೃತೀಯ),ಜನಪದ ನೃತ್ಯ -ಅಭಿಜ್ಞಾ, ರೇಷ್ಮಾ ,ಸುಮನ ,ಅದಿತಿ ,ಭೂಮಿಕ ಹೆಚ್ ಗೌಡ ,ರಕ್ಷಿತಾ(ತೃತೀಯ) ಬಹುಮಾನ ಪಡೆದುಕೊಂಡಿದ್ದಾರೆ. ಪ್ರಸ್ತುತ ವರ್ಷದ ಸಾಂಸ್ಕೃತಿಕ ತಂಡದ ನೇತೃತ್ವವನ್ನು ಶಾಲಾ ಇಂಗ್ಲಿಷ್ ಭಾಷಾ ಶಿಕ್ಷಕ ಪ್ರವೀಣ್ ಕುಮಾರ್ ಇವರು ವಹಿಸಿದ್ದರು. ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಗುರು ಸತೀಶ್ ಭಟ್ ಅವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕರು ತರಬೇತಿ ನೀಡಿದ್ದರು.
