ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಜ.24, 25ರಂದು ನಡೆಯಲಿರುವ 10ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ, ಚಂಡಿಕಾಯಾಗ ಹಾಗೂ ರಾಜನ್ ದೈವ ಮಲರಾಯ, ರಕ್ತೇಶ್ವರಿ ಮತ್ತು ಸಪರಿವಾರ ದೈವಗಳ ನೇಮೋತ್ಸವದದ ಆಮಂತ್ರಣ ಪತ್ರಿಕೆ ಬಿಡುಗಡೆ ನ.23ರಂದು ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಮುಖ್ಯ ಅರ್ಚಕ ವೇ.ಮೂ. ಶ್ರೀಧರ ಭಟ್ ಕಬಕ ಪ್ರಾರ್ಥನೆ ನೆರವೇರಿಸಿ ಆಮಂತ್ರಣ ಪತ್ರಿಕೆ ಸಮಿತಿಯವರಿಗೆ ಹಸ್ತಾಂತರಿಸಿದರು. ಅರ್ಚಕ ಮನಮೋಹನ್ ಭಟ್, ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್ ಬೊಳುವಾರು, ಉತ್ಸವ ಸಮಿತಿ ಅಧ್ಯಕ್ಷ ಧನಂಜಯ ರೈ ನಾಯಿಲ, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬಲ್ಲಾಳ್, ಜತೆ ಕಾರ್ಯದರ್ಶಿ ಜಯಕಿರಣ್, ಜತೆ ಕೋಶಾಧಿಕಾರಿ ಪುಷ್ಪಲತಾ ಬಿ ಪೂಜಾರಿ, ಟ್ರಸ್ಟಿಗಳಾದ ಮನೋಹರ್ ರೈ, ಶೋಭಾ ಭಾಸ್ಕರ ಹೆಗ್ಡೆ, ಕಿರಣ ಶಂಕರ ಮಲ್ಯ, ಸ್ಥಳಿಯರಾದ ಪುಟ್ಟಣ್ಣ ನಾಯ್ಕ, ನಿತಿನ್ ಪ್ರಸಾದ್, ರೋಹಿತ್, ಅನಂತಕೃಷ್ಣ, ಶ್ರೀಲಕ್ಷ್ಮೀ, ಸುಮನ ನಾಯ್ಕ, ಜಯಂತಿ ಜನಾರ್ಧನ್, ಉಷಾ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
