ರಾಧಾಕೃಷ್ಣ ಭಜನಾ ಮಂದಿರ, ಬಪ್ಪಳಿಗೆ, ಪುತ್ತೂರು. ಫೋನ್: 08251-231637, 9481960637

131 ವರ್ಷಗಳ ಇತಿಹಾಸವಿರುವ ಶ್ರೀ ರಾಧಾಕೃಷ್ಣ ಭಜನಾ ಮಂದಿರವಿದೆ. ೧೮೮೩ರಲ್ಲಿ ಬೆಳ್ತಂಗಡಿಯ ಕೃಷ್ಣರಾಯರಿಂದ ಈ ಭಜನಾ ಮಂದಿರವು ಸ್ಥಾಪನೆಗೊಂಡಿತು. ಇಲ್ಲಿ ಪ್ರಥಮವಾಗಿ ರಾಧೆ ಮತ್ತು ಕೃಷ್ಣ ದೇವರನ್ನು ಪ್ರತಿಷ್ಠಾಪನೆಗೊಳಿಸಲಾಯಿತು. ೧೯೪೮ರಲ್ಲಿ ಶಿವ ದೇವರನ್ನು ಪ್ರತಿಷ್ಠಾಪನೆಗೊಳಿಸಲಾಯಿತು. ಇಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ, ರಾಮ ನವಮಿ ಹಾಗೂ ಕಾರ್ತಿಕ ಹುಣ್ಣಿಮೆ ಆಚರಣೆಯು ನಡೆಯುತ್ತಿದೆ. ಇಲ್ಲಿ ಅಮೃತ ಶಿಲೆಯ ರಾಧೆ ಮತ್ತು ಕೃಷ್ಣ ವಿಗ್ರಹಗಳಿರುವುದು ವಿಶೇಷವಾಗಿದೆ.