ರಾಮ್ಕೊ ಸಿಮೆಂಟ್ ಬಳಕೆದಾರ ಮೇಸ್ತ್ರಿಗಳ ಮಹಾಸಮ್ಮೇಳನ

0

ಪುತ್ತೂರು: ರಾಮ್ಕೋ ಸಿಮೆಂಟ್ ಬಳಕೆದಾರ ಮೇಸ್ತ್ರಿಗಳ ಮಹಾಸಮ್ಮೇಳನ ಕೊಟೇಚಾ ಹಾಲ್‌ನಲ್ಲಿ ಆ.22 ರಂದು ನಡೆಯಿತು. ಕಾರ್ಯಕ್ರಮವನ್ನು ರಾಮ್ಕೊ ಸಿಮೆಂಟ್ ಮಾರಾಟಗಾರರಾದ ಕುಡ್ಗಿ ಎಂಟರ್‌ಪ್ರೈಸಸ್‌ನ ವಿನೀತ್ ಶೆಣೈ, ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ ನಾಯಕ್, ಪಡೀಲ್ ವಿಘ್ನೇಶ್ವರ ಸ್ಟೀಲ್ & ಹಾರ್ಡ್‌ವೇರ್‌ನ ಸುಧೀರ್ ಶೆಟ್ಟಿ, ಇಂಡಿಯನ್ ಸ್ಟೀಲ್ & ಮಾರ್ಬಲ್‌ನ ಟಿ. ಸುಬ್ರಹ್ಮಣ್ಯ ಭಟ್, ಮಲ್ನಾಡ್ ಎಂಟರ್‌ಪ್ರೈಸಸ್‌ನ ಉಮ್ಮರ್, ಮಂಗಳ ಎಂಟರ್‌ಪ್ರೈಸಸ್‌ನ ಮಹಾಲಕ್ಷ್ಮಿ ಕೆಮ್ಮಿಂಜೆ ಉದ್ಘಾಟಿಸಿದರು.

ರಾಮ್ಕೋ ಸಿಮೆಂಟಿನ ಬಗ್ಗೆ AGM (ಟೆಕ್ನಿಕಲ್) ಸೂರಜ್ ಶೆಟ್ಟಿ ಮಾಹಿತಿ ನೀಡಿದರು. ರಾಮ್ಕೋ ವತಿಯಿಂದ ಪದ್ಮನಾಭ, ಇಬ್ರಾಹಿಂ, ಸುರೇಂದ್ರ (ಅಣ್ಣು), ಅಬ್ದುಲ್ ರಹಿಮಾನ್, ಶರೀಫ್, ಸತೀಶ್ ಕುಲಾಲ್‌ರವರನ್ನು ಸನ್ಮಾನಿಸಲಾಯಿತು.

ಮಂಗಳೂರು ಸಿಝ್ಲರ‍್ಸ್ ಗೈಸ್ ವತಿಯಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ರಾಮ್ಕೋ ಸಿಮೆಂಟಿನ ಡಿ.ಜಿ.ಎಂ ಮಾರ್ಕೆಟಿಂಗ್ ರಾಘವೇಂದ್ರ ಪ್ರಸಾದ್, ನವಾಝ್ ಹಾಗೂ ಇತರರು ಉಪಸ್ಥಿತರಿದ್ದರು. ರಾಮ್ಕೋ ಕಂಪನಿಯ ದಿನೇಶ ಸ್ವಾಗತಿಸಿ, ಶಿವರಾಜ್ ವಂದಿಸಿದರು.

LEAVE A REPLY

Please enter your comment!
Please enter your name here