ಸವಣೂರು ಪೊಸಾರು ತಿಮ್ಮಕ್ಕೆ ಫಾರ್ಮ್ಸ್‌ನಲ್ಲಿ ಕೆಸರುಗದ್ದೆ ಆಟ

0

ಪುತ್ತೂರು: ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ “ತಿಮ್ಮಕ್ಕೆ ಫಾರ್ಮ್ಸ್” ಪೊಸಾರು ಸುಜಿತ್ ಕುಮಾರ್ ಶೆಟ್ಟಿರವರ ಗದ್ದೆಯಲ್ಲಿ ಕೆಸರುಗದ್ದೆ ಆಟ ಜರಗಿತು.

ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದುರವರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ, ಪೊಸಾರು ತಿಮ್ಮಕ್ಕೆ ಫಾರ್ಮ್ಸ್‌ನ ಮಾಲಕ ಸುಜಿತ್ ಕುಮಾರ್ ಶೆಟ್ಟಿರವರು ದೀಪ ಬೆಳಗಿಸಿ, ಕಾರ‍್ಯಕ್ರಮ ಉದ್ಘಾಟಿಸಿದರು.

ಸವಣೂರು ಗ್ರಾ.ಪಂ ಅಧ್ಯಕ್ಷೆ ರಾಜೀವಿ ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಮಮತಾ ದೇವಸ್ಯ, ನಿರ್ದೇಶಕ ಪ್ರಕಾಶ್ ಕುದ್ಮನಮಜಲು, ಸವಣೂರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ. ಸವಣೂರು, ಸವಣೂರು ಸಿ.ಎ, ಬ್ಯಾಂಕ್ ನಿರ್ದೇಶಕ ಕರುಣಾಕರ ಪೂಜಾರಿ ಪಟ್ಟೆ, ಸಾಮಾಜಿಕ ಮುಂದಾಳುಗಳಾದ ದಯಾನಂದ ಮಾಲೆತ್ತಾರು, ಕೃಷ್ಣಪ್ಪ ಗೌಡ ಮಾಲೆತ್ತಾರು, ಜಗನ್ನಾಥ ಶೆಟ್ಟಿ ನಡುಬೈಲು, ವಿಠಲ ಶೆಟ್ಟಿ ಕೆಡೆಂಜಿ ಉಪಸ್ಥಿತರಿದ್ದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು ಸ್ವಾಗತಿಸಿ, ಕಾರ‍್ಯದರ್ಶಿ ಜಿತಾಕ್ಷ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಸವಣೂರು ಸಿ.ಎ, ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಪ್ರಮೋದ್ ಕೆ.ಆರ್, ದಿವಾಕರ್ ಬಸ್ತಿ, ಸಾಮಾಜಿಕ ಮುಂದಾಳುಗಳಾದ ಶರತ್ ಕುಮಾರ್ ರೈ ದೇವಸ್ಯ, ಶಿವರಾಮ ಗೌಡ ಮೆದು, ಸತೀಶ್ ಬಲ್ಯಾಯ, ರಾಮಕೃಷ್ಣ ಪ್ರಭುರವರುಗಳು ಉಪಸ್ಥಿತರಿದ್ದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು ಕಾರ‍್ಯಕ್ರಮ ನಿರೂಪಿಸಿದರು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ವರ್ಧೆಗಳನ್ನು ಆಯೋಜನೆ ಮಾಡಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here