ಅ.16: ಬ್ಯಾಂಕಿಂಗ್, ಪೊಲೀಸ್, ಪಿಡಿಓ, ರೈಲ್ವೇ, ಸೇನಾ ನೇಮಕಾತಿಗಳಿಗೆ ಪೂರ್ವ ತಯಾರಿ ತರಬೇತಿ

0

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ಎಪಿಎಂಸಿ ರಸ್ತೆ ಹಿಂದೂಸ್ಥಾನ್ ಸಂಕೀರ್ಣದ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ IBPS, ಗ್ರಾಮೀಣ ಬ್ಯಾಂಕ್, ಕೋ-ಆಪರೇಟಿವ್ ಸೊಸೈಟಿಗಳು, ಕೆಎಂಎಫ್, ಕ್ಯಾಂಪ್ಕೋ ಸೇರಿದಂತೆ ಎಲ್ಲಾ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಹಾಗೂ ಪೊಲೀಸ್ ಸಬ್‌ಇನ್ಸ್ ಪೆಕ್ಟರ್/ಕಾನ್‌ಸ್ಟೇಬಲ್, ಅರಣ್ಯ ಇಲಾಖೆ ನೇಮಕಾತಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO), ಗ್ರಾಮ ಪಂಚಾಯತ್ ಕಾರ್ಯದರ್ಶಿ, ಅಗ್ನಿಪಥ್, ಎನ್‌ಡಿಎ ಸೇರಿದಂತೆ ಭಾರತೀಯ ಸೇನಾ ನೇಮಕಾತಿಗಳಿಗೆ ನಡೆಯುವ ಲಿಖಿತ ಪರೀಕ್ಷೆಯ ಬಗೆಗಿನ ಪೂರ್ವ ತಯಾರಿ ತರಬೇತಿ ನಡೆಯಲಿದೆ.

ಅ.16 ರಂದು ಬೆಳಗ್ಗೆ 9.30 ರಿಂದ ಸಾಯಂಕಾಲ 4ರ ವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಓದಿರುವ ಅಥವಾ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9148935808 / 859077348ಕ್ಕೆ ಕರೆ ಮಾಡಿ ಅಥವಾ ವಿದ್ಯಾಮಾತಾ ಅಕಾಡೆಮಿಯಲ್ಲಿ ಖುದ್ದಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆಯೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here