ರಾಜ್ ಜ್ಯುವೆಲ್ಲರ್‍ಸ್‌ನಲ್ಲಿ ಲಕ್ಷ್ಮೀ ಪೂಜೆ

0

ಪುತ್ತೂರು: ಕೋರ್ಟ್‌ರಸ್ತೆಯ ಡಿಸೈನರ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಸುತ್ತಿರುವ ರಾಜ್ ಜ್ಯುವೆಲ್ಲರ್‍ಸ್‌ನಲ್ಲಿ 26ನೇ ವರ್ಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಅ.24 ರಂದು ಲಕ್ಷ್ಮೀಪೂಜೆ ನಡೆಯಿತು.

ಬೆಳಿಗ್ಗೆ ವೈದಿಕರಾದ ಹರಿಪ್ರಸಾದ್ ಭಟ್ ಕೆದಿಲರವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಧನಲಕ್ಷ್ಮೀ ಪೂಜೆ ನಡೆಯಿತು. ಗ್ರಾಹಕರು, ಹಿತೈಷಿಗಳು, ಸಮಾಜ ಬಾಂಧವರು ಹಾಗೂ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ರಾಜ್‌ಶೇಖರ್ ಆಚಾರ್ಯ ಎಸ್. ಸ್ವಾಗತಿಸಿದರು. ಮಾಲಕರ ಪತ್ನಿ ರೇಖಾ ರಾಜ್‌ಶೇಖರ್ ಆಚಾರ್ಯ, ಪುತ್ರರಾದ ರಿತ್ವಿಕ್ ಆಚಾರ್ಯ, ರೂಪಕ್ ಆಚಾರ್ಯ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಆಶ್ಮಿತಾ, ಸ್ವಾತಿ ಸಹಕರಿಸಿದರು.

LEAVE A REPLY

Please enter your comment!
Please enter your name here