ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕುಣಿತ ಭಜನಾ ತರಬೇತಿ ಉದ್ಘಾಟನೆ

0

ನಿಡ್ಪಳ್ಳಿ; ರಣಮಂಗಲ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ನೇತೃತ್ವದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಇವರು ಕುಣಿತ ಭಜನಾ ತರಬೇತಿಯನ್ನು ಅ.23 ರಂದು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್, ಸುಬ್ರಹ್ಮಣ್ಯ ಭಜನಾ ತಂಡದ ಅಧ್ಯಕ್ಷರಾದ ಶೋಭಿತ್ ಭರಣ್ಯ, ಮಿತ್ತಡ್ಕ ಕೇಸರಿ ಭಜನಾ ತಂಡದ ಹರೀಶ್ ಗೌಡ ಮಿತ್ತಡ್ಕ ಉಪಸ್ಥಿತರಿದ್ದರು.

ಕೇಸರಿ ಭಜನಾ ತಂಡ ಮಿತ್ತಡ್ಕ ಇದರ ಸದಸ್ಯರಿಂದ ತರಬೇತಿ ನಡೆಯಲಿದ್ದು ಸುಮಾರು ನಲುವತ್ತಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here