ನೀವಿರುವಲ್ಲಿಗೆ ಮಧ್ಯಾಹ್ನದ ಮನೆ ಊಟ : ರಿಷಭ ಆರೋಗ್ಯ ಆಹಾರ ಸೇವೆ ಅಕ್ಟೋಬರ್ 31 ರಿಂದ ಆರಂಭ

0

ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಕಛೇರಿ, ಬ್ಯಾಂಕ್, ಅಂಗಡಿ ಇನ್ನಿತರ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಮಧ್ಯಾಹ್ನದ ಊಟದ ಆಯ್ಕೆ ಒಂದು ಸಮಸ್ಯೆಯೇ ? ಕೆಲವು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸೇವೆಯಲ್ಲಿದ್ದ “ರಿಷಭ ಆರೋಗ್ಯ ಆಹಾರ ಸೇವೆ” ಮತ್ತೊಮ್ಮೆ ಅಕ್ಟೋಬರ್ 31 ರಿಂದ ಹಲವು ಹೊಸತನ ಮತ್ತು ಹೊಸ ರುಚಿಯೊಂದಿಗೆ ಆರಂಭಗೊಳ್ಳಲಿದೆ.

ನಿಮ್ಮ ಕಛೇರಿ ಬಾಗಿಲಿಗೆ ಮಧ್ಯಾಹ್ನದ ಊಟದ ಯೋಜನೆ ಇದಾಗಿದ್ದು ಯಾವುದೇ ರಾಸಾಯನಿಕ ಮಸಾಲೆ ಪದಾರ್ಥಗಳನ್ನು ಉಪಯೋಗಿಸದೆ ತಯಾರಾಗುವ ಆಯುರ್ವೇದಿಕ್ ಮಾದರಿಯಲ್ಲಿ ಶುಚಿ ರುಚಿಯಾದ ಮಧ್ಯಾಹ್ನದ ಊಟ ನಿಮ್ಮ ಹೊಟ್ಟೆ ತಂಪಾಗಿಸಲಿದೆ.

ಗ್ರಾಹಕರಿಗೆ ಕಡಿಮೆ ಬೆಲೆಗೆ ಪರಿಶುದ್ಧ ಆಹಾರ ಒದಗಿಸಿಕೊಡುವುದು ಈ ಸೇವೆಯ ಪ್ರಮುಖ ಧ್ಯೇಯವಾಗಿದ್ದು ಗ್ರಾಹಕರು ಈ ಹಿಂದೆ ನೀಡಿದ್ದ ಸಹಕಾರವನ್ನೇ ಸ್ಪೂರ್ತಿಯಾಗಿಸಿಕೊಂಡು ಇನ್ನಷ್ಟು ಹೊಸತನಗಳೊಂದಿಗೆ ಸೇವೆಯನ್ನು ಆರಂಭಿಸಲಿದ್ದು ಮಧ್ಯಾಹ್ನದ ಊಟವನ್ನು ನಗುಮೊಗದೊಂದಿಗೆ ಕ್ಲಪ್ತ ಸಮಯದಲ್ಲಿ ಸಂಸ್ಥೆಯ ಉತ್ಸಾಹಿ ಹುಡುಗರು ಗ್ರಾಹಕರಿರುವ ಸ್ಥಳಕ್ಕೆ ತಲುಪಿಸುವ ಯೋಜನೆ ಇದು.

ಈ ಸೇವೆಯ ಪ್ರಯೋಜನ ಪಡೆದುಕೊಳ್ಳಲು ಆಸಕ್ತಿ ಇರುವವರು ನಮ್ಮ ಮೊಬೈಲ್ ಸಂಖ್ಯೆ 9036113468 ಕರೆ ಅಥವಾ ವಾಟ್ಸಾಪ್ ಮೆಸೇಜ್ ಮಾಡಬಹುದು ಎಂದು ರಿಷಭ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here