ಕೆಯ್ಯೂರು; ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ (ರಿ) ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ 2 ಕ್ರಿಕೆಟ್ ಪಂದ್ಯಾಟ ಮತ್ತು 19ನೇ ವರ್ಷದ ವಾರ್ಷಿಕೋತ್ಸವವು ನ11ರಿಂದ ನ13ರ ವರೆಗೆ ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಕೆಯ್ಯೂರು ದೇವಳದಲ್ಲಿ ಪೂಜೆ ಸಲ್ಲಿಸಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ರಾವ್ ನ1ರಂದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಗೌರವ ಸಲಹೆಗಾರಾರದ ಸದಾಶಿವ ಭಟ್ ಕೆಯ್ಯೂರು, ಕೃಷ್ಣಪ್ರಸಾದ್ ರೈ ಕಣಿಯಾರು, ಅಧ್ಯಕ್ಷರಾದ ದಿನೇಶ್ ಕೆ.ಎಸ್, ಉಪಾದ್ಯಕ್ಷ ಗೋಪಾಲಕೃಷ್ಣ ಸಂತೋಷ್ ನಗರ, ಖಜಾಂಚಿ ಚಂದ್ರಶೇಖರ ರೈ ಸಣಂಗಳ, ಕ್ರೀಡಾಕಾರ್ಯದರ್ಶಿ ಪ್ರವೀಣ್ ಕಟ್ಟತ್ತಾರು, ಕಾರ್ಯದರ್ಶಿ ಪ್ರದೀಪ್ ರೈ ಸಣಂಗಳ, ಮಾಜಿ ಅಧ್ಯಕ್ಷರುಗಳಾದ ಸತೀಶ್ ರೈ ದೇವಿನಗರ, ಶರತ್ ಕುಮಾರ್ ರೈ ದೇರ್ಲ, ಸದಸ್ಯರುಗಳಾದ ಕೃಷ್ಣ ಸಾಮಾನಿ ಕೆಯ್ಯೂರು, ವಿನೋದ್ ಕುಮಾರ್ ಕೆ.ಎಸ್, ಶರತ್ ಕುಮಾರ್ ಮಾಡಾವು, ಪ್ರಶಾಂತ್ ಕುಮಾರ್ ಬಾಕ್ತಿಮಾರ್, ರಾಕೇಶ್ ಬಲ್ಲಾಳ್, ಚಂದ್ರಶೇಖರ ಆಚಾರ್ಯ ಮಾಡಾವು, ಜಯದೀಪ್ ರೈ, ಶಶಿಧರ ಆಚಾರ್ಯ ಮಾಡಾವು ಉಪಸ್ಥಿತರಿದ್ದರು.