![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಮಹಾಬಲ-ಲಲಿತ ಕಲಾ ಸಭಾ ಪುತ್ತೂರು ಇವರು ಆಯೋಜಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ನ.20 ರಂದು ಸಂಜೆ ಬೊಳುವಾರು ಮಾಹವೀರ ವೆಂಚರ್ಸ್ನ ರಿಲಯನ್ಸ್ ಟ್ರೆಂಡ್ಸ್ ಮೇಲಿನ ಮಹಡಿಯ ಹವಾ ನಿಯಂತ್ರಿತ ಸಭಾಭವನದಲ್ಲಿ ಜರಗಿತು.
ವಿದುಷಿ ಜೆ.ಬಿ ಕೀರ್ತನಾ ಶ್ರೀರಾಮ್ ಚೆನ್ನೈ ಇವರು ಹಾಡುಗಾರಿಕೆಯನ್ನು ನಿರ್ವಹಿಸಿದ್ದು, ವಿದ್ವಾನ್ ಸಾಯಿರಕ್ಷಿತ್ ಚೆನ್ನೈ ಇವರು ಪಿಟೀಲು, ವಿದ್ವಾನ್ ಸುಮೇಶ್ ನಾರಾಯಣ್ ಚೆನ್ನೈ ಇವರು ಮೃದಂಗ, ವಿದ್ವಾನ್ ಸುನಿಲ್ ಚೆನ್ನೈ ಇವರು ಖಂಜಿರ, ವಿದುಷಿ ಭಾಗ್ಯಲಕ್ಷ್ಮೀ ಕೃಷ್ಣ ಬೆಂಗಳೂರು ಇವರು ಮೋರ್ಚಿಂಗ್ ನುಡಿಸಿ ಸಹಕರಿಸಿದರು. ನೂರಾರು ಮಿಕ್ಕಿ ಸಂಗೀತಾಭಿಮಾನಿಗಳು ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಮಹಾಬಲ-ಲಲಿತ ಕಲಾ ಸಭಾದ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.