ತೆಂಕಿಲ ಕಟ್ಟತ್ತಾರು ದಾಜಮ್ಮ ನಿಧನ

0


ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಪಾರಂಪರಿಕ ನೌಕರ ದಿ.ಶೀನಪ್ಪ ಗೌಡ ಅವರ ಪತ್ನಿ ದಾಜಮ್ಮ(78ವ) ಅವರು ಡಿ.21 ರಂದು ರಾತ್ರಿ ನಿಧನರಾದರು.
ತೆಂಕಿಲ ಕಟ್ಟತ್ತಾರು  ದಿ.ಶೀನಪ್ಪ ಅವರ ಮನೆಮಂದಿಯೆಲ್ಲ ದೇವಳದ ಪಾರಂಪರಿಕ ಪರಿಚಾರಕರಾಗಿ ಸೇವೆ ಮಾಡುತ್ತಿದ್ದು, ಶೀನಪ್ಪ ಗೌಡ ಮೃತಪಟ್ಟ ಬಳಿಕ ಅವರ ಪತ್ನಿ ಮತ್ತು ಮಕ್ಕಳು ಸೇವೆಯನ್ನು ಮುಂದುವರಿಸುತ್ತಿದ್ದರು. ಡಿ.೨೧ ರ ರಾತ್ರಿ ಶೀನಪ್ಪ ಗೌಡ ಅವರ ಪತ್ನಿ ನಿಧನರಾದರು. ಮೃತರು ಪುತ್ರಿಯರಾದ ಕಮಲ, ಶ್ಯಾಮಲ, ನಳಿನಿ ಮತ್ತು ಪುತ್ರರಾದ ಕೆಎಸ್ ಆರ್ ಪಿಯಲ್ಲಿ ಎ ಆರ್ ಎಸ್ ಐ ಆಗಿರುವ ಸೀತಾರಾಮ, ಮಾಜಿ ಸೈನಿಕರಾದ ಚಂದ್ರಶೇಖರ, ಮೋಹನ, ದೇವಳದ ಬಸವನ‌ ಚಾಕ್ರಿ ಸೇವೆ ಮಾಡುತ್ತಿರುವ ವಸಂತ, ಲಕ್ಷ್ಮಣ ಅವರನ್ನು ಅಗಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯ ರಾಮದಾಸ್ ಗೌಡ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಸಹಿತ ಹಲವಾರು ಮಂದಿ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಶಾಸಕರಿಂದ ಸಂತಾಪ:
ಇಬ್ಬರು ಮಕ್ಕಳನ್ನು ಸೇನೆಗೆ, ಒಬ್ಬರನ್ನು ಪೋಲೀಸ್ ಇಲಾಖೆ ಮೂಲಕ ದೇಶ ಸೇವೆಗೆ ನೀಡಿದ,
ದೇವಳದ ಪಾರಂಪರಿಕ ಪರಿಚಾರಕ ಕುಟುಂಬದ ದಿ ಶೀನಪ್ಪ ಗೌಡರ ಪತ್ನಿ ದಾಜಮ್ಮ ನಿಧನಕ್ಕೆ ಶಾಸಕ ಸಂಜೀವ ಮಠಂದೂರು ಅವರು ಬೆಳಗಾವಿಯಿಂದ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here