ಕುಂಜೂರುಪಂಜ ಶಾಲೆಗೆ ವೆಂಕಟ್ರಾಮಯ್ಯ ಫೌಂಡೇಶನ್‌ನಿಂದ ಬ್ಯಾಂಡ್ ಸೆಟ್ ಹಸ್ತಾಂತರ

0

ಪುತ್ತೂರು: ಕುಂಜೂರುಪಂಜ ದ.ಕ.ಜಿ.ಪ.ಹಿ. ಪ್ರಾ. ಶಾಲೆಗೆ ನೂಜಿಬೈಲು ವೆಂಕಟ್ರಾಮಯ್ಯ ಫೌಂಡೇಷನ್ ವತಿಯಿಂದ ನೀಡಲಾದ ಬ್ಯಾಂಡ್ ಸೆಟ್ ಅನ್ನು ಡಿ.23ರಂದು ಹಸ್ತಾಂತರಿಸಲಾಯಿತು.

ಫೌಂಡೇಶನ್‌ನ ಪ್ರಮುಖರಾದ ಯನ್.ಟಿ. ರಾಜಗೋಪಾಲ್ ವೇದಿಕೆಯಿಂದ ಬ್ಯಾಂಡನ್ನು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವೇಶ್ವರ ಭಟ್ ಬಂಗಾರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಮೇಜರ್ ವೆಂಕಟ್ರಾಮಯ್ಯರು ಫಿಲೋಮಿನಾ ಕಾಲೇಜಿನಲ್ಲಿ ದೀರ್ಘಕಾಲ ಕ್ರೀಡಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಮಯದಲ್ಲಿ ಮಾಡಿದ ಸಾಧನೆಗಳು ಹಾಗೂ ಶ್ರೇಷ್ಟ ಕ್ರೀಡಾಳುಗಳನ್ನು ಬೆಳೆಸಿದ ಬಗ್ಗೆ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿಯ ಸೇವ ನಿರತರಾದ ಇಗ್ನೇಶಿಯಸ್ ಡಿಸೋಜಾ ಹಾಗೂ ಹಿರಿಯರಾದ ಗೋಪಾಲ ಭಟ್ಟರು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿ, ರಾಕೇಶ್ ಶರ್ಮಾ ವಂದಿಸಿದರು. ಶಿಕ್ಷಕಿ ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here