ಶಬರಿಮಲೆ ಯಾತ್ರಾರ್ಥಿ ಗಂಗಾಧರ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ನಿಧನ

0

ಪುತ್ತೂರು: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಕೆಯ್ಯೂರು ಗ್ರಾಮದ ದೇರ್ಲ ಕೃಷ್ಣಪ್ಪ ನಾಯ್ಕರವರ ಪುತ್ರ ಗಂಗಾಧರ್ ಡಿ ರವರು ಕ್ಯಾಲಿಕೇಟ್‌ನ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ದ.21ರಂದು ನಿಧನ ಹೊಂದಿದ್ದಾರೆ.

ಗಂಗಾಧರ್ ದೇರ್ಲರವರು ಬೆಳ್ಳಾರೆಯಿಂದ ಬೆಂಗಳೂರಿನ ಸಹೋದ್ಯೋಗಿಗಳೊಂದಿಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಶಬರಿಮಲೆಯ ಎಲಿಮೆಲೆಗೆ ತಲುಪಿ ಅಲ್ಲಿ ನದಿ ನೀರಿನಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಗಂಗಾಧರ್‌ರವರು ತನ್ನ ಬಳಗದಿಂದ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿನ ಪೊಲೀಸರಿಗೆ ಇವರ ಜೊತೆಗಿದ್ದವರು ದೂರು ನೀಡಿದ್ದರು. ಸಂಜೆ ವೇಳೆಗೆ ಪೊಲೀಸರು ಗಂಗಾಧರ್‌ರವರನ್ನು ಹುಡುಕಿ ಬಳಗಕ್ಕೆ ಒಪ್ಪಿಸಿದ್ದರು. ಆದರೆ ಆ ಬಳಿಕ ಗಂಗಾಧರ್‌ರವರು ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಕೋಯಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗಂಗಾಧರ್‌ರವರು ನಿಧನ ಹೊಂದಿದ್ದಾರೆ.

ಮೃತರು ತಾಯಿ ಗಿರಿಜಾ, ಪತ್ನಿ ಉಷಾ, ಪುತ್ರಿಯರಾದ ಹರ್ಷಿತಾ, ಲಿಖಿತಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here