ಅಂದೇರ ಛಟೇಗ, ಸೂರಜ್ ನಿಕ್ಲೇಗ, ಕಮಲ್ ಕಿಲೇಗ ವಾಜಪೇಯಿ ಹೇಳಿಕೆ 2014ರಲ್ಲಿ ಸಾಕಾರ – ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ವಾಜಪೇಯಿ ಜನ್ಮದಿನದ ಸೇವಾ ಸುಶಾಸನ್‌: ಚಂದ್ರಶೇಖರ್ ರಾವ್ ಬಪ್ಪಳಿಗೆ

0


ಪುತ್ತೂರು: ಸೈದಾಂತಿಕ ವಿಚಾರದಲ್ಲಿ ದೃಢನಿರ್ಧಾರ ಮತ್ತು ಮಂತ್ರಮುಗ್ಧನಾಗಿಸುವ ನಾಯಕತ್ವ ಹೊಂದಿರುವ ಅಟಲ್ ಬಿಹಾರಿ ವಾಜಪೇಯಿ ಅವರು 1980ರ ವೇಳೆ ಮುಂಬಯಿಯಲ್ಲಿ “ಅಂದೇರ ಛಟೇಗ, ಸೂರಜ್ ನಿಕ್ಲೇಗ, ಕಮಲ್ ಕಿಲೇಗ ” ಎಂದು ಹೇಳಿದ ಮಾತು 2014ರಲ್ಲಿ ನರೇಂದ್ರ ಮೋದಿಯವರು ಸಾಕಾರಗೊಳಿಸಿದರು ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್  ಬಪ್ಪಳಿಗೆ ಅವರು ಹೇಳಿದರು.
ಕೊಂಬೆಟ್ಟಿನಲ್ಲಿರುವ ಅಟಲ್ ಉದ್ಯಾನದಲ್ಲಿ ಡಿ.25ರಂದು ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ 98 ನೇ ಜನ್ಮದಿನದ ಸೇವಾಸುಶಾನ್ ಕಾರ್ಯಕ್ರಮದಲ್ಲಿ ವಾಜಪೇಯಿ  ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದಿಕ್ಸೂಚಿ ಭಾಷಣ ಮಾಡಿದರು. ವಾಜಪೇಯಿ ಅವರು ಜನಸಂಘದಿಂದ ಜನಸ್ನೇಹಿಯಾಗಿ ಬಿಜೆಪಿಯ ಬಲಾಡ್ಯ ನಾಯಕನಾಗಿ ಬೆಳೆದು ಬಂದ ರೀತಿ ಅದ್ಭುತ. ವಾಜಪೇಯಿ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು, ನೀವೆಲ್ಲರೂ ನಡೆಯಬೇಕಿದೆ. ರಾಷ್ಟ್ರೀಯ ವಿಚಾರಗಳು, ದೇಶ ಭಕ್ತಿ, ಭಾರತೀಯತೆ, ಸಂಸ್ಕೃತಿ, ಪರಂಪರೆಯ ಕುರಿತು ಹೆಮ್ಮೆ ಪಡುವ ಜೊತೆಗೆ ಅವುಗಳನ್ನು ಭಾರತೀಯರೆಲ್ಲರೂ ಪಾಲಿಸುವಂತೆ ನೋಡಿಕೊಳ್ಳಬೇಕಿದೆ ಎಂದರು. ನಗರ ಮಂಡಲ ಅಧ್ಯಕ್ಷ, ನಗರ ಸಭಾ ಸ್ಥಳೀಯ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ರವರು ಸ್ವಾಗತಿಸಿ, ಬೂತ್ ಉಪಾಧ್ಯಕ್ಷ ಗಣೇಶ್ ಬಾಳಿಗ ವಂದಿಸಿದರು. ಬೊಳುವಾರು ಶಕ್ತಿ ಕೇಂದ್ರ ಪ್ರಮುಖ್ ನೀಲಂತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ರಾಮಚಂದ್ರ ಘಾಟೆ, ಶೋಭಾ ಪ್ರವೀಣ್, ಪಾಂಡುರಂಗ ನಾಯಕ್ , ಪದಂ ಸಿಂಗ್, ಭಾಮಿ ಪದ್ಮನಾಭ ನಾಯಕ್, ಮನೋಹರ್ ರಾಜ ಪುರೋಹಿತ್, ಅನ್ನಪೂರ್ಣ, ಜಯರಾಮ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here