ರೋಟರಿ ಸೆ೦ಟ್ರಲ್ ನಿಂದ ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿಗಳಿಗೆ “ಅರಿವು” ಕಾರ್ಯಕ್ರಮ

0

ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ವತಿಯಿಂದ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ “ವಿದ್ಯಾಸಿರಿ” ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ “ಅರಿವು” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ರಫೀಕ್ ದರ್ಬೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ರೈ, ಪ್ರಭಾರ ಪ್ರಾಂಶುಪಾಲ ರಾಜಶೇಖರ್ ಎಮ್, ಅರಿವು ಕಾರ್ಯಕ್ರಮದ ಸಂಯೋಜಕ ಡಾ| ರಾಜೇಶ್ ಬೆಜ್ಜಂಗಳ, ಅರಿವು ಕಾರ್ಯಕ್ರಮದ ಸಲಹೆಗಾರ ರಾಕೇಶ್ ಶೆಟ್ಟಿ ಮತ್ತು ಇನ್ನೊರ್ವ ಸಲಹೆಗಾರ ಕ್ಲಬ್ ನ ಕಾರ್ಯದರ್ಶಿ ಚಂದ್ರಹಾಸ ರೈ ಬಿ.ಯವರು ಮೂರು ವಿಷಯಗಳ ಕುರಿತು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಪೂರ್ವಾದ್ಯಕ್ಷ ನವೀನ್ ಚಂದ್ರ ನಾಯ್ಕ್, ದೈಹಿಕ ಶಿಕ್ಷಣದ ಶಿಕ್ಷಕ ಮಾಮಚ್ಚನ್ ಎಂ ಉಪಸ್ಥಿತರಿದ್ದರು,

ರೋಟರಿ ಸೆಂಟ್ರಲ್ ಅಧ್ಯಕ್ಷರಾದ ರಫೀಕ್ ದರ್ಬೆ ಸ್ವಾಗತಿಸಿ ಕಾರ್ಯದರ್ಶಿ ಚಂದ್ರಹಾಸ ರೈ ವಂದಿಸಿದರು.

LEAVE A REPLY

Please enter your comment!
Please enter your name here