ಕುಂತೂರುಪದವು ಶಾಲೆಯಲ್ಲಿ ಆಲಂಕಾರು ಜೇಸಿಐಯಿಂದ ತರಬೇತಿ ಕಾರ್ಯಾಗಾರ

0

ಪೆರಾಬೆ: ಜೇಸಿಐ ಆಲಂಕಾರು ಇದರ ವತಿಯಿಂದ ಕುಂತೂರುಪದವು ಸಂತ ಜಾರ್ಜ್ ಪ್ರೌಢಶಾಲೆಯಲ್ಲಿ ‘ಅರೈಸ್ ಮತ್ತು ಅವೇಕ್’ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.


ಸಂತಜಾರ್ಜ್ ಪ್ರೌಢಶಾಲೆಯ ಮುಖ್ಯಗುರು ಹರಿಶ್ಚಂದ್ರ ಕೆ.,ಉದ್ಘಾಟಿಸಿದರು. ಸಂಸ್ಥೆಯ ಹಿರಿಯ ಶಿಕ್ಷಕಿ ತ್ರೇಸಿಯಮ್ಮ ಶುಭಹಾರೈಸಿದರು. ಜೇಸಿಐ ವಲಯ 15 ರ ತರಬೇತಿ ವಿಭಾಗದ ನಿರ್ದೇಶಕ ಪ್ರದೀಪ್ ಬಾಕಿಲ, ವಲಯ ತರಬೇತುದಾರ ಚೇತನ್ ಮೊಗ್ರಾಲ್‌ರವರು ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು. ಶಾಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here