ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರ ಸಭೆ

0

ಕೆಯ್ಯೂರು:  ಕೆದಂಬಾಡಿ ಗ್ರಾಮದ ತಿಂಗಳಾಡಿ ದೇವತಗಿರಿ ಮಂದಿರದಲ್ಲಿ ಜ20 ರಂದು ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಸಭೆಯು ನಡೆಯಿತು. ಸಭೆಯಲ್ಲಿ ಯುವ ಮೋರ್ಚಾ ಜಿಲ್ಲಾ  ಉಪಾಧ್ಯಕ್ಷ ಸಹಜ್ ರೈ ಬಳಜ್ಜ ಉಪಸ್ಥಿತಿಯಲ್ಲಿ  ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಬಗ್ಗೆ ಮಾತನಾಡಿ ಇನ್ನು ಮುಂದೆ ಬರುವ ಚುನಾವಣೆಯ ವಿಷಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕೆದಂಬಾಡಿ ಗ್ರಾಮದಲ್ಲಿ ಸರಕಾರದ ಸಾಧನೆಯನ್ನು ಮಾಡಿದ ಕೆಲಸವನ್ನು ಮನೆ ಮನೆಗೆ ತಲುಪಿಸಬೇಕು ಎಂದು ತಿಳಿಸಿದರು.
ಈ ಸಭೆಯಲ್ಲಿ ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ರೇಖಾ ರಾಘವ ಗೌಡ  ಕೆರೆಮೂಲೆ  ನೇಮಕ ಮಾಡಲಾಯಿತು ಮತ್ತು ಸಾಮಾಜಿಕ ಜಾಲತಾಣದ ಪ್ರಾಮುಖ್ಯ ಜನಾರ್ದನ ರೈ .ಕೆ ಕೊಡಂಗಿರಿ, ಚರಣ್ ರೈ ಕುರಿಕ್ಕಾರ ,ರೋಹಿತ್ ಗೌಡ,  ಸೂರ್ಯ ಪ್ರಸನ್ ರೈ ಎಂಡಸಾಗು  ನೇಮಕ ಮಾಡಲಾಯಿತು.
ಈ ಸಭೆಯಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ, ಕುಂಬ್ರ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ,ಟಿಎಪಿಸಿ  ಎಂ ಎಸ್ ಅಧ್ಯಕ್ಷ ಕೆದಂಬಾಡಿ ಕೃಷ್ಣಕುಮಾರ್ ರೈ ಗುತ್ತು,ಕೆದಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭಾಸ್ಕರ್ ರೈ ಮಿತ್ರಂಬಾಡಿ ತಾಲೂಕು ರೈತ ಮೋರ್ಚಾ ಸದಸ್ಯ ಮಹಾಬಲ ರೈ ಕುಕ್ಕು ಜೋಡು, ದೇವತಗಿರಿ ಭಜನಾ ಮಂದಿರದ ಅಧ್ಯಕ್ಷ ಜಯರಾಮ್ ರೈ ಮಿತ್ರಂಬಾಡಿ, ಗಣೇಶ್ ರೈ ಮಿತ್ರಂಬಾಡಿ, ಪುಷ್ಪ ಎಂ ಬೊಳೋಡಿ, ಕೆದಂಬಾಡಿ  ಬೂತಿನ ಅಧ್ಯಕ್ಷರುಗಳಾದ ವೀಣಾ ಆರ್ ರೈ ಬೆದ್ರುಮಾರು,  ಸೀತಾರಾಮ ಗೌಡ ಇದ್ಯಪೆ, . ಕೊರಗಪ್ಪ ಪೂಜಾರಿ ತಿಂಗಳಾಡಿ, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಕುಮಾರ್ ಇದ್ಯಪ್ಪೆ, ಚಂದ್ರ ಇದ್ಪಾಡಿ, ಶರತ್ ಕುಮಾರ್ ಗುತ್ತು, ಎ ಟಿ ನಾರಾಯಣ್ ತಿಂಗಳಾಡಿ, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಜಾತ ಎಂ, ಜಯಲಕ್ಷ್ಮೀ ಬಳ್ಳಾಲ್, ರೇವತಿ ಬಿ, ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಸದಸ್ಯರುಗಳಾದ ಸೂರ್ಯ ಪ್ರಸನ್ ರೈ ಎಂಡಸಾಗು, ಬಾಬು, ವೀರಪ್ಪ ನಾಯ್ಕ, ಹರೀಶ್ ರೈ ಮಿತ್ರಂಬಾಡಿ ,ಐ ಸಿ ಉದಯ್ ಕುಮಾರ್ ಇದ್ಯಪ್ಪೆ, ತಾರಾನಾಥ್ ರೈ ಕುರಿಕ್ಕಾರ ಲೋಹಿತ್ ಗೌಡ ಗುತ್ತು, ಮಂಜುನಾಥ್ ಇದ್ಪಾಡಿ, ಪುಷ್ಪರಾಜ್ ಚಾವಡಿ ,ಕಿರಣ್ ಕುಮಾರ್ ಡಿ, ಕೊರಗಪ್ಪ, ಮೋಹನ ತಿಂಗಳಾಡಿ ಉಪಸ್ಥಿತರಿದ್ದರು.
ಶರತ್ ಕುಮಾರ್ ಗುತ್ತು ಸ್ವಾಗತಿಸಿ, ಕೃಷ್ಣಕುಮಾರ್ ಇದ್ಯಪೆ ವಂದಿಸಿದರು.

LEAVE A REPLY

Please enter your comment!
Please enter your name here