ಮೀಪಾಲು, ಪಾತಾಜೆ, ಮಾದೋಡಿ, ಅಬೀರ ಪರಿಸರಗಳಲ್ಲಿ ಚಿರತೆ ಪ್ರತ್ಯಕ್ಷ – ರಕ್ಷಣೆ ನೀಡುವಂತೆ ಗ್ರಾಮಸ್ಥರಿಂದ ಮನವಿ

0

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿರುವ ಬಗ್ಗೆ ವರದಿಯಾಗಿದೆ.

ಬೆಳಂದೂರು ಗ್ರಾಮದ ಮೀಪಾಲು, ಪಾತಾಜೆ, ಮಾದೋಡಿ ಹಾಗೂ ಅಬೀರ, ಕಾನಾವು ಪರಿಸರಗಳಲ್ಲಿ ಚಿರತೆಯೊಂದು ಹಲವು ದಿನಗಳಿಂದ ತಿರುಗಾಡುತ್ತಿದೆ. ಇದರಿಂದ ಜನರು ಭಯಭೀತಿಯಿಂದ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಸಂಬಂಧ ಪಟ್ಟವರು ಸೂಕ್ತ ಕ್ರಮಕೈಗೊಂಡು ತಮಗೆ ರಕ್ಷಣೆ ನೀಡುವಂತೆ ಬೆಳಂದೂರು ಗ್ರಾಮ ಪಂಚಾಯತ್ ಗೆ ಸ್ಥಳೀಯ ಗ್ರಾ. ಪಂ.ಸದಸ್ಯ ಜಯಂತ ಅಬೀರರವರ ಮುಖಾಂತರ ಗ್ರಾಮಸ್ಥರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here