ನೆಲ್ಲಿಕಟ್ಟೆ ಪ್ರಭಾಕರ ಶೆಟ್ಟಿ ನಿಧನ

0

ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ಪ್ರಭಾಕರ ಶೆಟ್ಟಿ (75ವ) ರವರು ಅಲ್ಪಕಾಲದ ಅಸೌಖ್ಯದಿಂದ ಮಾ.11 ರಂದು ಬೆಳಿಗ್ಗೆ ಬೆಂಗಳೂರು ಮಗಳ ಮನೆಯಲ್ಲಿ ನಿಧನರಾದರು.


ಪ್ರಭಾಕರ ಶೆಟ್ಟಿ ಅವರ ಬೆಂಗಳೂರಿನಲ್ಲಿರುವ ಮಗಳು ಪೂರ್ಣಿಮ ಶೆಟ್ಟಿ ಅವರ ಮನೆಯಲ್ಲಿ ನಿಧನರಾದರು. ನೆಲ್ಲಿಕಟ್ಟೆ ಮಿತ್ರಮಂಡಲಿ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು
ಪುತ್ತೂರು‌ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳ ಹಿಂದೆ ಪ್ರಶಾಂತ್ ಸ್ಟಾಲ್ ಹೊಂದಿದ್ದರು. ಪುತ್ತೂರು ಕಿಲ್ಲೆ ಮೈದಾನದ ಸಾರ್ವಜನಿಕ‌ ಶ್ರೀ ಗಣೇಶೋತ್ಸವದ ದೇವತಾ ಸಮಿತಿ ಉಪಾಧ್ಯಕ್ಷರಾಗಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪದಾಧಿಕಾರಿಯಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪುತ್ರಿ ಪೂರ್ಣಿಮಾ, ಪ್ರಶಾಂತ್ ಶೆಟ್ಟಿ ಹಾಗೂ ಸಹೋದರ ಕಾಂಗ್ರೆಸ್ ಹಿರಿಯ ಮುಖಂಡ ಎನ್ ಸುಧಾಕರ್ ಶೆಟ್ಟಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here