ಕುಂಜೂರುಪಂಜ ಒಕ್ಕೂಟದ ತ್ರೈಮಾಸಿಕ ಸಭೆ

0

ಪುತ್ತೂರು : ಕುಂಜೂರುಪಂಜ ಒಕ್ಕೂಟದ ತ್ರೈಮಾಸಿಕ ಸಭೆಯು ಸಭೆಯು ಶ್ರೀ ಮಂಜುನಾಥ ಸಭಾಭವನದಲ್ಲಿ ಒಕ್ಕೂಟ ಅಧ್ಯಕ್ಷರಾದ ಮಹಾಲಿಂಗ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ಮಾ.12ರಂದು ನಡೆಯಿತು.

ವೇದಿಕೆಯಲ್ಲಿ ಮೇಲ್ವಿಚಾರಕರು ಹರೀಶ್ ಕುಲಾಲ್, ಸಿಎಸ್ ಸಿ ಸೆಂಟರ್ ನ ಜಿಲ್ಲಾ ನೋಡೆಲ್ ಅಧಿಕಾರಿ ಸಚಿನ್, ಸೇವಾ ಪ್ರತಿನಿಧಿ ಆಶಾಲತಾ , ಒಕ್ಕೂಟದ ಉಪಾಧ್ಯಕ್ಷರು ಉಮಾವತಿ, ಕಾರ್ಯದರ್ಶಿ ಶರ್ಮಿಳಾ, ಜೊತೆ ಕಾರ್ಯದರ್ಶಿ, ರೇಣುಕಾ, ಕೋಶಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

ಮೇಲ್ವಿಚಾರಕರು ಒಕ್ಕೂಟ ಸಭೆಯ ನಿಯಮದ ಬಗ್ಗೆ, ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ, ಸಂಪೂರ್ಣ ಸುರಕ್ಷಾ, ಅರೋಗ್ಯ ರಕ್ಷಾ ದ ಬಗ್ಗೆ ಮಾಹಿತಿ ನೀಡಿದರು, ಬಳಿಕ ನೋಡೆಲ್ ಅಧಿಕಾರಿ ದಿಶಾ, ಅಯುಷ್ಮಾನ್ ಕಾರ್ಡ್, ಟೆಲಿ ಲಾ ಸರ್ವಿಸ್, ಪಾನ್ ಕಾರ್ಡ್, ಪಿ ಎಮ್ ಕಿಸಾನ್, ಬೀಮಾ ಜ್ಯೋತಿ ಪಾಲಿಸಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಶ್ರೀ ಶಾರದಾ ಸಂಘ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here