ಮಾ.18ಕ್ಕೆ ಉಳ್ಳಾಲದಲ್ಲಿ ಅಹ್ಲನ್ ರಮಝಾನ್ ಕಾರ್ಯಕ್ರಮ

0

ಪುತ್ತೂರಿನಿಂದ ಸಾವಿರಾರರು ಮಂದಿ ತೆರಳಲಿದ್ದಾರೆ

ಪುತ್ತೂರು: ನ್ಯಾಷನಲ್ ಮಿಷನ್ ಕರ್ನಾಟಕ ಇದರ ಶೈಕ್ಷಣಿಕ ಅಭಿಯಾನದ ಅಂಗವಾಗಿ ಮಾ.18ರಂದು ಸಂಜೆ ಉಳ್ಳಾಲದ ಹಝ್ರತ್ ಮೈದಾನದಲ್ಲಿ ಅಹ್ಲನ್ ರಮಝಾನ್ ಕಾರ್ಯಕ್ರಮ ನಡೆಯಲಿದ್ದು ಪುತ್ತೂರಿನಿಂದ ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸಲಿದ್ದಾರೆ ಎಂದು ನ್ಯಾಷನಲ್ ಮಿಷನ್ ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷ ಅಬ್ದುಲ್ ರಶೀದ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸಯ್ಯದ್ ಮುಹಮ್ಮದ್ ಜೆಫ್ರಿ ಮುತ್ತುಕೋಯ ತಂಘಳ್, ಸಯ್ಯದ್ ಸ್ವಾದಿಖಲಿ ಶಿಹಾಬ್ ತಂಗಳ್ ಪಾಣಕ್ಕಾಡ್, ಶೈಖುನಾ ಶೈಖುಲ್ ಜಾಮಿಯಾ, ಅಲಿಕುಟ್ಟಿ ಮುಸ್ಲಿಯಾರ್ ಸಹಿತ ಅನೇಕ ಮಹಾನ್ ಸಾದಾತುಗಳು ಪಂಡಿತರು ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರಿನಿಂದ ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸುವ ನಿರೀಕ್ಷೆಯಿಂದ್ದು ಅಂದು ಸಂಜೆ ಗಂಟೆ 4ಕ್ಕೆ ದರ್ಬೆ ದುಗ್ಗಮ್ಮ ವೃತ್ತದಿಂದ ಹೊರಡುವುದು ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಂಇಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪುತ್ತೂರು ರೇಂಜ್‌ನ ಕೋಶಾಧಿಕಾರಿ ಅಬ್ದುಲ್ ರಝಕ್ ಹಾಜಿ, ವರ್ಕಿಂಗ್ ಪ್ರಸಿಡೆಂಟ್ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಎಸ್‌ಕೆ.ಎಸ್.ಎಸ್‌ಎಫ್ ಪುತ್ತೂರು ವಲಯ ಅಧ್ಯಕ್ಷ ಹಾಜಿ ಬಾತಿಷ ಪಾಟ್ರಕೋಡಿ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here