ಎಸ್‌ಡಿಪಿಐ ಕುರಿಯ ಬೂತ್ ಸಮಿತಿಯಿಂದ ರಂಝಾನ್ ಕಿಟ್ ವಿತರಣೆ

0

ಪುತ್ತೂರು: ಎಸ್‌ಡಿಪಿಐ ಕುರಿಯ ಬೂತ್ ಸಮಿತಿ ವತಿಯಿಂದ ವರ್ಷಂಪ್ರತಿಯಂತೆ ರಂಝಾನ್ ತಿಂಗಳಲ್ಲಿ ದಾನಿಗಳ ನೆರವಿನಿಂದ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ಮಾ.24ರಂದು ನಡೆಯಿತು. ಸುಮಾರು 120ರಷ್ಟು ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಅತಿಥಿಗಳಾಗಿ ಆಗಮಿಸಿದ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಕುರಿಯದ ಎಸ್‌ಡಿಪಿಐನ ಯುವಕರ ಕಾರ್ಯ ಶ್ಲಾಘನೀಯ ಮತ್ತು ಮಾದರಿಯಾಗಿದೆ ಎಂದು ಹೇಳಿದರು. ಪಕ್ಷದ ಹಿರಿಯ ನಾಯಕರಾದ ಪಿಬಿಕೆ ಮಹಮ್ಮದ್, ಆರ್ಯಾಪು ಚುನಾವಣಾ ಉಸ್ತುವಾರಿ ಅಶ್ರಫ್ ಸಂಟ್ಯಾರ್ ಶುಭ ಹಾರೈಸಿದರು.

ಕಾರ್ಯಕರ್ತರಾದ ಅಶ್ರಫ್, ಝೈದ್, ಜಬ್ಬಾರ್ ಕುರಿಯ, ಜಬ್ಬಾರ್ ಅಜ್ಜಿಕಟ್ಟೆ, ಸಾದಿಕ್ ಕುರಿಯ, ಶಾಕಿರ್ ಮುಂಡೂರು, ನಿಝಾಂ ಪಂಜಳ, ಫಾರುಕ್ ಪಿ.ಎಸ್, ರವೂಫ್ ಕುರಿಯ, ಪವಾಝ್ ಕುರಿಯ ಹಾಗೂ ಪಕ್ಷದ ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here