ಶಾಂತಿನಾಥ ಬಸದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಭರತ್ ಕುಮಾರ್ ಆರಿಗ ಆಯ್ಕೆ

0

ಪುತ್ತೂರು:ಪುತ್ತೂರಿನ ಶ್ರೀ ಶಾಂತಿನಾಥ ಬಸದಿಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಎ.4ರ ಮಹಾವೀರ ಜಯಂತಿಯಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.


ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಗುಣಪಾಲ ಜೈನ್‌ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಭರತ್ ಕುಮಾರ್ ಆರಿಗ ಸದಸ್ಯರುಗಳಾಗಿ ಸತೀಶ್ ಪಡಿವಾಳ್, ವಿದ್ಯಾಧರ ಜೈನ್, ಶ್ರೀಧರ ಹೆಗ್ಡೆ, ರಾಜೇಶ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಗುಣಪಾಲ ಜೈನ್ ವರದಿ ಮಂಡಿಸಿದರು. ಸುದರ್ಶನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here