ಮಾಸ್ಟರ್ ಅತ್ಲೆಟಿಕ್ಸ್ :ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕೊಣಾಜೆಯ ಆಶಾಲತ ದಂಪತಿಗೆ ಶ್ರೀ.ಕ್ಷೇ.ಧ.ಗ್ರಾ.ಯೋ. ವತಿಯಿಂದ ಸನ್ಮಾನ

0

ಕಡಬ : ಇತ್ತಿಚ್ಚೆಗೆ ಮಾಸ್ಟರ್ ಅತ್ಲೇಟಿಕ್ಸ್ ನಲ್ಲಿ ಪ್ರಥಮ ಸ್ಥಾನ ಗಳಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕೊಣಾಜೆಯ ದಯಾನಂದ ಪೂಜಾರಿಯವರ ಪತ್ನಿ ಆಶಾಲತಾ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ )ಕಡಬ . ಹಾಗೂ ಜ್ಞಾನವಿಕಾಸ ಕೇಂದ್ರದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಆಶಾಲತ ಅವರು ನಿವೇದಿತಾ ಜ್ಞಾನವಿಕಾಸ ಕೇಂದ್ರ ಕೊಣಾಜೆಯ ಸದಸ್ಯೆಯಾಗಿದ್ದು ಈ ಹಿನ್ನಲೆಯಲ್ಲಿ ಆಶಾಲತಾ ದಯಾನಂದ ಪೂಜಾರಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಇವರನ್ನು ನಿವೇದಿತ ಜ್ಞಾನವಿಕಾಸ ಕೇಂದ್ರದ ವತಿಯಿಂದ ತಾಲೂಕಿನ ಯೋಜನಾಧಿಕಾರಿಗಳಾದ ಮೇದಪ್ಪ ಗೌಡ ಎನ್ ಅಭಿನಂದಿಸಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಆಶಾಲತಾ ರವರು ರಾಷ್ಟ್ರ ಮಟ್ಟದ ಕ್ರೀಡಾಕೂಟ ದಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ವಾಗಿದೆ ಅವರ ಸಾಧನೆ ಗೆ ಪ್ರೋತ್ಸಾಹಿಸಿದ ಅವರ ಪತಿ ದಯಾನಂದ ಪೂಜಾರಿಯವರ ವ್ಯಕ್ತಿತ್ವವನ್ನು ಮೆಚ್ಚುವಂತದ್ದು ಎಂದು ಅಭಿನಂದಿಸಿ ಶುಭ ಹಾರೈಸಿದರು.ಕೇಂದ್ರದ ಸದಸ್ಯರು ಆಶಾಲತಾ ದಂಪತಿಗಳನ್ನು ಫಲ ಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು . ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕೆ ಸ್ಥಳೀಯ ಒಕ್ಕೂಟದ ಅಧ್ಯಕ್ಷರಾದ ಡೀಕಯ್ಯ ಗೌಡ ಒಕ್ಕೂಟದ ಕಾರ್ಯದರ್ಶಿ ಪ್ರಶಾಂತ್ ಮೇಲ್ವಿಚಾರಕರಾದ ಆನಂದ ಡಿ ಬಿ ಉಪಸ್ಥಿತರಿದ್ದರು .

ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚೇತನ ಜಿ ಕಾರ್ಯಕ್ರಮ ಆಯೋಜಿಸಿದರು. ಕೇಂದ್ರದ ಸದಸ್ಯೆ ಗಿರಿಜಾ ಕಾರ್ಯಕ್ರಮ ನಿರೂಪಿಸಿದರು ವೀಣಾ ಭಟ್ ಸ್ವಾಗತಿಸಿದರು. ಕುಸುಮಾವತಿ ವರದಿ ವಾಚಿಸಿದರು. ಸೇವಾಪ್ರತಿನಿಧಿ ಬೇಬಿ ವಂದಿಸಿದರು ಸದಸ್ಯರೆಲ್ಲರೂ ಸಹಕರಿಸಿದರು

LEAVE A REPLY

Please enter your comment!
Please enter your name here