ಪುತ್ತೂರಿನ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಮುಂಗಡ ಬುಕ್ಕಿಂಗ್ ಇಂದು(ಎ.21) ಕೊನೆ

0

ಪ್ರತೀ 45 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಗೆ ಲಭಿಸಲಿದೆ ಚಿನ್ನದ ನಾಣ್ಯ

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವ್ಯವಹಾರ ನಿರತವಾಗಿರುವ ಅಂತರ್ರಾಷ್ಟ್ರೀಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನಲ್ಲಿ ಅಕ್ಷಯ ತೃತೀಯದ ಅಂಗವಾಗಿ ಅಡ್ವಾನ್ಸ್ ಬುಕ್ಕಿಂಗ್ ಆರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಅಕ್ಷಯ ತೃತೀಯ ಪ್ರಯುಕ್ತ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ನಡೆಯುತ್ತಿದ್ದು, ಗ್ರಾಹಕರು ತಮ್ಮಿಚ್ಚೆಯ ಚಿನ್ನಾಭರಣಗಳನ್ನು ಆಯ್ಕೆ ಮಾಡಿ ಒಟ್ಟು ಮೌಲ್ಯದ ಅಲ್ಪ ಹಣವನ್ನು ಮುಂಗಡ ಪಾವತಿ ಮಾಡಿ ಬುಕ್ಕಿಂಗ್ ಮಾಡಬಹುದಾಗಿದೆ. ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವ ವೇಳೆ ಚಿನ್ನದ ಬೆಲೆ ಬುಕ್ಕಿಂಗ್ ಮಾಡಿದ ದರಕ್ಕಿಂತ ಹೆಚ್ಚಾಗಿದ್ದರೆ ಬುಕ್ಕಿಂಗ್ ಮಾಡಿದ ಬೆಲೆಗೇ ಚಿನ್ನಾಭರಣವನ್ನು ಖರೀದಿಸಲು ಸಂಸ್ಥೆ ಅವಕಾಶ ಕಲ್ಪಿಸಲಿದೆ. ಇಷ್ಟು ಮಾತ್ರವಲ್ಲದೆ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ ಗ್ರಾಹಕರು ಪ್ರತೀ 45ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಸಿದ ವೇಳೆ ಚಿನ್ನದ ನಾಣ್ಯ ಉಚಿತವಾಗಿ ಲಭಿಸಲಿದೆ. ಅಕ್ಷಯ ತೃತೀಯದ ಮುಂಗಡ ಬುಕ್ಕಿಂಗ್ ಎ.21 ರಂದು ಕೊನೆಗೊಳ್ಳಲಿದೆ.

ವಜ್ರಾಭರಣಗಳ ಮೇಲೆ 20% ರೀಯಾಯಿತಿ ಹಾಗೂ ಪ್ಲಾಟಿನಂ ಆಭರಣಗಳ ಮೇಲೆ 7%ರಿಯಾಯಿತಿ ದೊರೆಯಲಿದೆ. ಅತೀ ಕಡಿಮೆ ಮೇಕಿಂಗ್ ಚಾರ್ಜಸ್‌ನೊಂದಿಗೆ ಮದುವೆ ಆಭರಣಗಳನ್ನು ಇಲ್ಲಿಂದ ಖರೀದಿಸ ಬಹುದಾಗಿದೆ.

ಇನ್ನುಳಿದಂತೆ ಅಕ್ಷಯ ತೃತೀಯಕ್ಕಾಗಿ ಹಲವಾರು ಕೊಡುಗೆಗಳನ್ನು ನೀಡಲುದ್ದೇಶಿಸಿರುವ ಜೋಸ್ ಆಲುಕ್ಕಾಸ್‌ನಲ್ಲಿ ಹೊಚ್ಚ ಹೊಸ ವಿನ್ಯಾಸದ ಚಿನ್ನ ಹಾಗೂ ವಜ್ರದ ಆಭರಣಗಳ ಬೃಹತ್ ಸಂಗ್ರಹ ಲಭ್ಯವಿದ್ದು ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಿದೆ.

ಕಳೆದ ಕೆಲ ವರುಷಗಳಿಂದ ಪುತ್ತೂರಿನ ಹೃದಯಭಾಗದಲ್ಲಿರುವ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಚಿನ್ನಭರಣ ಪ್ರಿಯರಿಗೆ ಹೊಸತನದ ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದು ಒಂದಲ್ಲ ಒಂದು ಹಬ್ಬದ ಪ್ರಯುಕ್ತ ವಿಶೇಷ ಆಫರ್, ರಿಯಾಯಿತಿ ಮಾರಾಟಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

LEAVE A REPLY

Please enter your comment!
Please enter your name here