ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ದ.ಕ ಕರ್ನಾಟಕ ಇವರಿಂದ ಸಹಾಯಧನ ವಿತರಣೆ

0


ಪುತ್ತೂರು: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಇವರು ಸುಮಾರು 5 ವರುಷಗಳಿಂದ ಧಾನಿಗಳ ಸಹಕಾರದಲ್ಲಿ ಹಲವಾರು ಬಡ ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ.

ದಿನಾಂಕ 24/4/2023 ರಂದು ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವರ ಸನ್ನಿದಾನದಲ್ಲಿ ಕರುಳು ಸಂಬಂಧಿತ ಖಾಯಿಲೆಯಿಂದ ಬಲಳುತ್ತಿರುವ ಮಂಗಳೂರಿನ ಗೌರವ್ ಎಂಬ 14 ವರ್ಷದ ಬಾಲಕನ ಚಿಕಿತ್ಸೆಗೆ ನೆರವಾಗಲು 17,259 ರೂಪಾಯಿಯ ಚೆಕ್ಕನ್ನು ದಾನಿಗಳ ಸಹಕಾರದಿಂದ ಹಾಗೂ ಶಶೀಂದ್ರ ಜಂಕಲ ಇವರ ಸಹಕಾರದಲ್ಲಿ ಶ್ರೀ ಕಾಳಿಕಾಂಬಾ ಗೊಂಬೆ ಬಳಗ ಬರಿಮಾರ್ ಇದರ ಮಾಲಕರಾದ ರಜನೀಶ್ ಇವರು ವಿತರಿಸಿದರು . ಕಾರ್ಯಕ್ರಮದಲ್ಲಿ ಅಧ್ಯಕ್ಸರಾದ ಡಿ ಎಸ್ ಒಡ್ಯ, ಸತ್ಯನಾರಾಯಣ ಭಟ್, ಕೋಶಧಿಕಾರಿ ಗಿರೀಶಾಮ್ಸ್, ಹಾಗೂ ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಮನೋಹರ್ ಪಲಯಮಜಲು ಸ್ವಾಗತಿಸಿ ಸಹಕಾರ ನೀಡುತ್ತಿರುವ ದಾನಿಗಳಿಗೆ ಹಾಗೂ ಸೇವಾಮಾಣಿಕ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here