ಕೋಲ್ಪೆ: ದ್ವಿಚಕ್ರ ವಾಹನ, ಕಾರು ಡಿಕ್ಕಿ-ಗಾಯ

0

ನೆಲ್ಯಾಡಿ: ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಗಾಯಗೊಂಡ ಘಟನೆ ಎ.22ರಂದು ಸಂಜೆ ನೆಲ್ಯಾಡಿ ಸಮೀಪದ ಕೋಲ್ಪೆಯಲ್ಲಿ ನಡೆದಿದೆ.

ಕೋಡಿಂಬಾಳ ಗ್ರಾಮದ ಕಡಬ ಜೂನಿಯರ್ ಕಾಲೇಜು ಬಳಿಯ ಹೊಯಿಗೆಕೆರೆ ನಿವಾಸಿ ಮಹಮ್ಮದ್ ಸಮದ್(29ವ.)ಎಂಬವರು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪತ್ನಿಯ ತವರು ಮನೆ ಕೊಣಾಲು ಗ್ರಾಮದ ಕೋಲ್ಪೆಗೆ ತನ್ನ ದ್ವಿಚಕ್ರ ವಾಹನ (ಕೆಎ21 ಯು6810)ದಲ್ಲಿ ಪತ್ನಿ ಮುಬೀನಾ ಬೇಗಂ ಮತ್ತು ಮಗ ಮಹಮ್ಮದ್ ಮಾಹೀರ್‌ನನ್ನು ಕುಳ್ಳಿರಿಸಿಕೊಂಡು ಬಂದು ಕೋಲ್ಪೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನವನ್ನು ರಸ್ತೆಯ ಬಲಬದಿಗೆ ತಿರುಗಿಸುತ್ತಿರುವಾಗ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು (ಕೆಎ20 ಎಂಡಿ 2589) ಡಿಕ್ಕಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನ ಸಮೇತ ಮೂವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಕಾರು ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರು ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವುದಾಗಿ ಮಹಮ್ಮದ್ ಸಮದ್‌ರವರು ನೀಡಿದ ದೂರಿನಂತೆ ಕಾರು ಚಾಲಕನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here