ಆಹಾರ ತಯಾರಿಕ ಘಟಕಕ್ಕೆ ದಿವ್ಯ ಪ್ರಭಾ ಭೇಟಿ-ಮತಯಾಚನೆ

0

ಪುತ್ತೂರು: ಸೋಲು ಗೆಲುವು ಒಂದು ನಾಣ್ಯದ ಎರಡು ಮುಖ. ಗೆಲುವಿನ ಪ್ರಯತ್ನ ಮಾತ್ರ ನಮ್ಮದಾಗಿರಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನೆಲಕಚ್ಚಿದ ಜೆಡಿಎಸ್ ಗೆ ಈ ಚುನಾವಣೆ ಹೊಸ ಬುನಾದಿಯನ್ನೇ ಹಾಕಿದೆ.

ಕಾಲಿಗೆ ಚಕ್ರ ಕಟ್ಟಿ ಪಾದರಸದಂತೆ ಕ್ಷೇತ್ರದಾದ್ಯಂತ ಓಡಾಡಿ ಪ್ರಚಾರ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಇಂದು ಪುತ್ತೂರಿನ ಮಹಿಳಾ ಪೌಷ್ಟಿಕಾಂಶ ಆಹಾರ ತಯಾರಕ ಘಟಕದ ಮಹಿಳೆಯರೊಂದಿಗೆ ಮಾತುಕತೆ ನಡೆಸಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ವಕ್ತಾರೆ ಜೋಹರ ನಿಸಾರ್, ಪದ್ಮ ಮಣಿ ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here