ನಗರದ ಹಲವೆಡೆ ಆಪ್ ಅಭ್ಯರ್ಥಿ ಡಾ.ವಿಶು ಕುಮಾರ್ ಕಾರ್ನರ್ ಮೀಟಿಂಗ್

0

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಅಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ವಿಶು ಕುಮಾರ್ ಬಿ ಕೆ ಪರ ಬಿರುಸಿನ ಚುನಾವಣಾ ಪ್ರಚಾರ ಸಭೆ ನಗರದ ಹಲವೆಡೆ ನಡೆಯಿತು.

ನಗರದ ಬೊಳುವಾರು, ಬಸ್ ನಿಲ್ದಾಣದ ಬಳಿ, ಕೋರ್ಟ್ ರಸ್ತೆ ಜಂಕ್ಷನ್ ನಲ್ಲಿ ಕಾರ್ನರ್ ಮೀಟಿಂಗ್ ನಡೆಸಿದ ಡಾ. ವಿಶು ಕುಮಾರ್ ಪಕ್ಷದ ವಿಚಾರ ಧಾರೆಗಳ ಬಗ್ಗೆ ಮಾಹಿತಿ ನೀಡಿ, ದೆಹಲಿ ಮತ್ತು ಪಂಜಾಬಿನಲ್ಲಿ ನೀಡಲಾದ ಕೊಡುಗೆಗಳ ಬಗ್ಗೆ ತಿಳಿಸಿದರು. ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಆಪ್‌ ಬೆಂಬಲಿಸುವಂತೆ ಮನವಿ ಮಾಡಿ ಮತ ಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here